ದಿವ್ಯ

Author : ಯು.ಆರ್. ಅನಂತಮೂರ್ತಿ

Pages 184

₹ 85.00




Year of Publication: 2001
Published by: ಅಕ್ಷರ ಪ್ರಕಾಶನ
Address: 9480280401 / 08183-265476
Phone: ಹೆಗ್ಗೋಡು, ಹೊನ್ನೇ

Synopsys

ಬಹುಚರ್ಚೆಗೆ ಕಾರಣವಾದ ಅನಂತಮೂರ್ತಿ ಅವರ ಕೃತಿಗಳಲ್ಲಿ ’ದಿವ್ಯ’ ಕೂಡ ಒಂದು. ಒಬ್ಬ ಸಾಹಿತಿಯಾಗಿ ಅವರ ಚಿಂತನಾಲಹರಿ ಹರಿವ ದಿಕ್ಕನ್ನೂ ಸೂಚಿಸುವಂತೆ ಮೂಡಿಬಂದ ಕಾದಂಬರಿ ಇದು. ಇಲ್ಲಿ ಬರುವ ಪಾತ್ರ ಸನ್ನಿವೇಶಗಳು ಅನಂತಮೂರ್ತಿ ಅವರ ಉಳಿದ ಕತೆಗಳಂತೆಯೇ ಇದ್ದರೂ ಹೊಸದೇನನ್ನೋ ಹೇಳಲು ಅವರು ಯತ್ನಿಸಿದ್ದಾರೆ.

ಕಾದಂಬರಿಯ ಬೆನ್ನುಡಿಯಲ್ಲಿ ಬರೆದಿರುವಂತೆ ’ಹಿಂದೆ ಕೊಳೆತ ಕೆರೆಯಂತೆ ಕಂಡ ಸ್ಥಳ ಈಗ ನಿಗೂಢವಾದ ಸರಸೂ ಆದೀತೆ ಆನಿಸುವಂತಿದೆ; ಒಂದ ಕೂಪಮಂಡೂಕಗಳಾಗಿ ಕಂಡ ವ್ಯಕ್ತಿಗಳು ಈಗ ಧ್ಯಾನಸ್ಥ ಋಷಿಗಳೂ ಆಗಿರಬಹುದೇ ಎಂಬ ಅನುಮಾನವನ್ನು ಈ ಕಥನ ಉದ್ದೀಪಿಸುವಂತಿದೆ. ಹಾಗಾಗಿ ಇದೊಂದು ಹಳೆಯ ಲೋಕದ ಹೊಸಸೃಷ್ಟಿ..’ 

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books