ಜಾತ್ರೆ

Author : ಬಸವಪ್ರಭು ಪಾಟೀಲ

Pages 124

₹ 100.00




Year of Publication: 2019
Published by: ಕವಿತಾ ಪ್ರಕಾಶನ
Address: ಕೆ. ಎಚ್. ಬಿ. ಕಾಲೋನಿ, ಮಾನ್ವಿ - 584123

Synopsys

ಡಾ. ಬಸವಪ್ರಭು ಪಾಟೀಲ ಬೆಟ್ಟದೂರು ಅವರ 'ಜಾತ್ರೆ' ಕಾದಂಬರಿಯು ಗ್ರಾಮೀಣ ಪರಿಸರವನ್ನು ಹೊಂದಿದ ಒಂದು ಕಥನ, 'ಜಾತ್ರೆ' ಕಾದಂಬರಿಯು ರಾಯಚೂರಾದಿಯಾಗಿ ಸುತ್ತಮುತ್ತಲ ಪ್ರದೇಶದ ಗ್ರಾಮೀಣ ಪರಿಸರವನ್ನು ಕಟ್ಟಿಕೊಂಡು ಹುಟ್ಟಿದ ಕೃತಿ. ಅದಕ್ಕನುಗುಣವಾಗಿ ಬಳಸಿದ ಭಾಷಾ ವಿನ್ಯಾಸವು ಕಾದಂಬರಿಯ ಗುಣಾತ್ಮಕ ಅಂಶವಾಗಿದೆ. 'ಜಾತ್ರೆ' ಕಾದಂಬರಿಯ ಭಾಷೆಯನ್ನು ನಾನು ಪ್ರಾದೇಶಿಕ ವೈವಿಧ್ಯದ ಘನತೆಗೆ ಒಂದು ಸೇರ್ಪಡೆಯೆಂದು ಸಂತೋಷಿಸುತ್ತೇನೆ.

ಬಸವಪ್ರಭು ಪಾಟೀಲರು ಪಾತ್ರಗಳ ಮಾತು ಮತ್ತು ಕಥನ ನಿರೂಪಣೆ - ಎರಡರಲ್ಲೂ ಭಾಷೆಯ ಪ್ರಾದೇಶಿಕ ವಿಶಿಷ್ಟತೆಯನ್ನು ಕಟ್ಟಿಕೊಟ್ಟಿದ್ದಾರೆ. 'ಜಾತ್ರೆ' ಕಾದಂಬರಿಯ ವಸ್ತು ಒಂದು ಗ್ರಾಮಕೇಂದ್ರಿತ ಕ್ರಿಯೆಗಳ ಸುತ್ತ ಹಬ್ಬಿಕೊಂಡಿದೆ. ಮಾರಮ್ಮನ ಜಾತ್ರೆಗೆ ಪ್ರಾಣಿಬಲಿ ಕೊಡುವ ಪದ್ಧತಿಯ ಮೌಡ್ಯದ ನಿರೂಪಣೆ ಮತ್ತು ಮೌಡ್ಯ ನಿವಾರಣೆಯ ಆಶಯಗಳನ್ನು ಈ ಕಾದಂಬರಿ ಒಳಗೊಂಡಿದೆ. ನಿರ್ದಿಷ್ಟ ನೈತಿಕ ಮೌಲ್ಯ, ನಿಷ್ಠತೆಯ ವಸ್ತುವಿಶೇಷವನ್ನು ಸಾದರಪಡಿಸುವ ಕಾದಂಬರಿಕಾರರ ಕಾಳಜಿ ಸಷ್ಟವಾಗಿ ಗೋಚರಿಸುತ್ತದೆ. ಕಾದಂಬರಿಯು ಪ್ರಾದೇಶಿಕ ವಿಶಿಷ್ಟ ವಲಯಕ್ಕೆ ಸೇರ್ಪಡೆಗೊಂಡ ಮತ್ತೊಂದು ಕೊಡುಗೆಯಾಗಿದೆ.

About the Author

ಬಸವಪ್ರಭು ಪಾಟೀಲ

ಡಾ. ಬಸವಪ್ರಭು ಪಾಟೀಲರು ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಸಾಹಿತಿಗಳು, ಶರಣ ಜೀವನವನ್ನು ಅಳವಡಿಸಿಕೊಂಡವರು. ಬೆಟ್ಟದೂರದಂತಹ ಊರಲ್ಲಿ ಹುಟ್ಟಿ ಮನೆಯ ಕಲೆ-ಸಾಹಿತ್ಯ-ಸಂಸ್ಕೃತಿ ಸಂಗಮದ ಪರಿಸರದಲ್ಲಿ ಬೆಳೆದವರು. ಎಂ.ಬಿ. ಬಿ.ಎಸ್, ಎಫ್, ಸಿ. ಜಿ. ಪಿ., ಡಿ.ಎಫ್. ಎಚ್. ಪದವಿಯನ್ನು ವೈದ್ಯಕೀಯದಲ್ಲಿ ಪಡೆದರು. ರಾಯಚೂರು ಜಿಲ್ಲೆಯ ಮಾನವಿಯಲ್ಲಿ ಕಲ್ಯಾಣ ವೈದ್ಯಾಲಯ ಸ್ಥಾಪಿಸಿ ವೈದ್ಯರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಇವರು ಕವಿಯಾಗಿ, ವೈಚಾರಿಕ ಸಾಹಿತಿಯಾಗಿದ್ದರಿಂದ ಮಾತನಾಡಿ ಹೆಣಗಳೇ, ಕವನ ಸಂಕಲನ, ಇದೇನು ಕತೆ, ವಿಚಾರ ಲೇಖನಗಳ ಸಂಗ್ರಹ ಹಾಗೂ ನವ ಸಾಕ್ಷರಿಗಾಗಿ ಪ್ರಥಮ ಚಿಕಿತ್ಸೆ ಕೃತಿ ಪ್ರಕಟಿಸಿದ್ದಾರೆ. ಪ್ರಪಂಚ, ವಿಶ್ವಕಲ್ಯಾಣ, ಸಂಕ್ರಮಣ, ...

READ MORE

Related Books