ಚೈತ್ರದ ಕೋಗಿಲೆ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 194

₹ 120.00




Year of Publication: 2011
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560083
Phone: 98454 49811

Synopsys

ಈ ಕಾದಂಬರಿಯ ಪಾತ್ರಗಳು ತುಂಬಾ ಆಕರ್ಷಕವಾಗಿದ್ದು,ಕಾಡುವಂತದ್ದು.ಕಾದಂಬರಿಕಾರ್ತಿ ಹೇಳುತ್ತಾರೆ,‘ಚೈತ್ರದ ಕೋಗಿಲೆ’ ನನಗೆ ಇಷ್ಟವಾದ ಕಾದಂಬರಿಗಳಲ್ಲಿ ಒಂದು. ಈ ಕಾದಂಬರಿಯನ್ನು ಓದುಗರ ಜೊತೆ ವಿಮರ್ಶಕರು ಕೂಡ ಮೆಚ್ಚಿಕೊಂಡಿದ್ದಾರೆ.ಹೆಚ್ಚು ಕಡಿಮೆ ಎಲ್ಲರಿಗೂ ಹೆಚ್ಚುಇಷ್ಟವಾದ ಪಾತ್ರ ಮುರಳಿಯದು. ಯಾಕೆ ‘ನಂಗೆ ಮುರಳಿ ಪಾತ್ರ ಇಷ್ಟ. ಅಂಥ ನೇರ, ಪ್ರಾಮಾಣಿಕ ಹೃದಯದ ಯುವಕ ಎಲ್ಲಿದ್ದಾನೆ?’ ಎಂದು ಪ್ರತಿಕ್ರಿಯಿಸಿದ ಓದುಗರಲ್ಲಿ ಬರೀ ಯುವತಿಯರು ಮಾತ್ರ ಇಲ್ಲ.ಅಂಥ ಮಗನನ್ನು ಬಯಸುವ ತಂದೆ ತಾಯಿಯರು ಅವನಂಥ ಅಣ್ಣ ಭಾವ ತಮಗಿರಲೆಂದು ಬಯಸುವ ಷೋಡಶಿಯರು ಇದ್ದಿದ್ದು ಅಚ್ಚರಿಯೆ.ಉತ್ತಮ ಕಾದಂಬರಿಗಳು ಸಂತೋಷದ ಜೊತೆ ಬೇಸರ ಮತ್ತು ದುಃಖವನ್ನು ಒಳಗೊಂಡಿರುತ್ತವೆ. ಮೊದಲ ಪುಟದಿಂದ ಕೊನೆಯ ಪುಟದವರೆಗೂ ಉದ್ವೇಗ ಹುಟ್ಟಿಸುವಂಥ ಕಾದಂಬರಿ ಮಹಾನ್ ಕೃತಿಯಾಗದು. ಶಾಂತತೆಯೇ ದೃಢ ವ್ಯಕ್ತಿತ್ವದ ಗುರುತು.ದುರ್ಬಲತೆಯನ್ನು ಬೇರೆಯವರಿಗೆ ನೋವಾಗದ ರೀತಿಯಲ್ಲಿ ಹತ್ತಿಕ್ಕುವ ಗುಣವನ್ನು ಮುರಳಿಯ ಪಾತ್ರದಲ್ಲಿ ಕಂಡೆ’ ಒಬ್ಬ ಹಿರಿಯ ಓದುಗರ ಅಭಿಪ್ರಾಯ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books