ಒಂಟಿ ದನಿ (ಕಾದಂಬರಿ)

Author : ಶಿವರಾಮ ಕಾರಂತ

Pages 287

₹ 140.00




Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಒಂಟಿ ದನಿ-ಡಾ. ಕೆ. ಶಿವರಾಮ ಕಾರಂತರ ಕಾದಂಬರಿ. ವ್ಯಕ್ತಿಗಳ ಒಳ-ಹೊರಗುಗಳಲ್ಲಿರುವ ಅಂತರವನ್ನು ಬಿಂಬಿಸುವ ಕಾದಂಬರಿ. ವಿವಿಧ ಕ್ಷೇತ್ರಗಳಲ್ಲಿ ದುಡಿಯುವಾಗ; ಪ್ರಾಮಾಣಿಕವಾಗಿ ತಮಗೆ ಅನಿಸಿದ್ದನ್ನು ಇತರರಿಗೆ ಬರಹ ಇಲ್ಲವೇ  ನೃತ್ಯ, ಸಂಗೀತಗಳ ಮೂಲಕವಾಗಲಿ ತಿಳಿಯಪಡಿಸಬೇಕೆನ್ನುವ ಬಯಕೆಗಿಂತ “ಲೋಕ ತನ್ನನ್ನು ಕಾಣಬೇಕು: ಕೇಳಬೇಕು’ ಎಂಬ ಪ್ರಚಾರಪ್ರಿಯತೆಯೇ ಕಾದಂಬರಿಯ ಹಲವಾರು ಮುಖ್ಯ ಪಾತ್ರಗಳ ಧ್ಯೇಯ-ಧೋರಣೆಗಳಾಗಿರುತ್ತವೆ. ಬದುಕಿಗೂ, ಜೀವನಕ್ಕೂ ಪರಸ್ಪರ ಸಂಬಂಧಗಳಿಲ್ಲದ ಹಲವಾರು ಬಗೆಯ ಇಂತಹ ಮುಖವಾಡಗಳನ್ನು ತೊಟ್ಟ ಜನರ ಸಂತೆಯಲ್ಲಿ 'ಲೋನ್ ವಾಯ್ಸ್’ ಪತ್ರಿಕೆಯಲ್ಲಿ ತನ್ನ ಅನುಭವಗಳನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಬರೆಯುತ್ತಿದ್ದ ಜಗನ್ನಾಥರಾಯನೊಬ್ಬನೇ ಭಿನ್ನ ವ್ಯಕ್ತಿ. ತನ್ನ ತಾಯಿ, ತಂಗಿ ಮತ್ತು ಅವಳ ಮಕ್ಕಳ ಸಂಸಾರಕ್ಕೆ ನೆರವಾಗುವ ಉದ್ದೇಶದಿಂದ ತನ್ನ ಅಲ್ಪ ವೇತನವನ್ನು ಅವರಿಗಾಗಿ ವ್ಯಯಿಸಿ, ಮದುವೆಯಾಗದೇ ಹೋದರೂ, ಪ್ರಾಮಾಣಿಕವಾಗಿ, ಶುದ್ಧ ಚಾರಿತ್ಯ್ರದಿಂದ ಬದುಕನ್ನು ಸಾಗಿಸುತ್ತಿದ್ದ ವ್ಯಕ್ತಿ ಜಗನ್ನಾಥರಾಯ, ಹಲವು ಜನರ ಗದ್ದಲಗಳ ನಡುವೆ ತನ್ನ ದನಿ ‘ಒ೦ಟದನಿ’ ಎಂಬ ಪರಿವೆ ಇದ್ದರೂ, ಯಾವುದೇ ಆಮಿಷಗಳಿಗೆ ಬಲಿಯಾಗದೆ ಕೊನೆಯವರೆಗೂ ಬಾಳಿದ ವ್ಯಕ್ತಿ. “ಉಸಿರು ಕಡಿಮೆಯಾದರೆ ಹೃದಯವೇ ನಿಲ್ಲುತ್ತದೆ. ದೇಹ ಸಾಯುತ್ತದೆ. ಪತ್ರಿಕೆ ಸಾಯುವುದು ಹೆಚ್ಚೇ ? ನಾವೇ ಸಾಯುವುದಿಲ್ಲವೆ ? ಆದರೆ, ನನ್ನಂತೆ ಸ್ವಂತ ದನಿಯುಳ್ಳವರು ಎಷ್ಟೋ ಜನರಿರಬಹುದು. ನನ್ನ ಬದಲು ಅವರು ಆಡುತ್ತಾರೆ: ಬರೆಯುತ್ತಾರೆ; ಅಚ್ಚು ಹಾಕಿಸುತ್ತಾರೆ. ಎಲ್ಲ ಜನರೂ ಕೇಳುತ್ತಾರೆಂದಲ್ಲ, ಕೇಳಲು ಯೋಗ್ಯವಾದ ವಿಚಾರಗಳು ನಮ್ಮಲ್ಲಿ ಇರುವ ತನಕ ಹೇಳುತ್ತ ಹೋಗುವುದು ನಮ್ಮ ಧರ್ಮ" ಎಂಬುದೇ 'ಒಂಟಿದನಿ' ಕಾದಂಬರಿಯ ಗಟ್ಟಿ ದನಿ.

ಭಾರತೀಯ ತಂದೆ; ಫ್ರೆಂಚ್ ತಾಯಿ: ಈ ದಂಪತಿಯ ಮಗಳು-ನಯನತಾರೆ. ಕಥಕ್, ಭರತನಾಟ್ಯ, ಓಡಸ್ಸಿ ಇತ್ಯಾದಿ ನಾಟ್ಯ ಪ್ರವೀಣೆ. ಅವಳ ನೃತ್ಯಗಳಲ್ಲಿ ಶಾಸ್ತ್ರದ ತಾಳ, ಪದಗತಿಗಳ ಲೆಕ್ಕಾಚಾರವೇ ಅಧಿಕವಾಗಿದ್ದರೂ ತಾನೊಬವ್ಬ ಮಹಾನ್ ಕಲಾವಿದೆ ಎಂಬ ಹೆಮ್ಮೆ ಇರುತ್ತದೆ. ಈ ತನ್ನ ಕಲೆಯ ಕುರಿತು ಹೆಚ್ಚು ಪ್ರಚಾರ ಬಯಸುವವಳು. ಜೊತೆಗೆ ಮತ್ಸರೆಯೂ ಹೌದು. ದೇವಕಿ-ನಂದಮಹಾರಾಜರ ನಾಟ್ಯಗಳನ್ನು ಕುರಿತು ಬೇರೊಬ್ಬರ ಹರಸರಿನಲ್ಲಿ ತಾನೇ ಟೀಕಿಸಿ ಬರೆಯುವವಳು. ಚಂದುಲಾಲ ಸಹ ಮೇಲ್ನೋಟಕ್ಕೆ ಅಧ್ಯಾತ್ಮಿಕ ವ್ಯಕ್ತಿ, ವೈರಾಗ್ಯವೇನಿದ್ದರೂ ಅದು ನಾಲಿಗೆಗೆ ಸೀಮಿತವಾಗಿತ್ತು. ಹಲವಾರು ಹೆಣ್ಣುಗಳೊಂದಿಗೆ ಸಂಪರ್ಕವಿರುತ್ತದೆ. ಅವರು ಗರ್ಭ ಧರಿಸಬಾರದು ಎಂದು ತಾವೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುತ್ತಾರೆ. ಆದರೆ, ಮಕ್ಕಳನ್ನು ಪಡೆಯಲು  ದೇವರಿಗೆ ಹರಕೆ ಹೊರು ಎಂದು ಒತ್ತಾಯಿಸುತ್ತಾರೆ. ಇವರ ಅಂತರಂಗವನ್ನು ಅರಿತ ಆತನ ಪತ್ನಿ, ಅನೈತಿಕ ಸಂಪರ್ಕದಿಂದ ಮಗುವನ್ನು ಪಡೆದು, ಹರಕೆ ಹೊತ್ತಿದ್ದರ ಫಲ ಎಂದು ಮುಖಕ್ಕೆ ರಾಚುವಂತೆ ಆಡಿ ತೋರಿಸುತ್ತಾಳೆ. ಹೀಗೆ ಬದುಕಿಗೂ, ಬೋಧೆಗೂ ಸಂಬಂಧವಿಲ್ಲದ ಹಲವಾರು ಪಾತ್ರಗಳು ಕಥೆಗೆ ವೇಗ ನೀಡುತ್ತವೆ. ‘ಲೋನ್ ವಾಯ್ಸ್’ ಪತ್ರಿಕೆಗೆ ಬರೆಯುವ ಜಗನ್ನಾಥರಾಯರ ಲೇಖನಗಳು ಆತ್ಮಸಾಕ್ಷಿಗೆ ಅನುಗುಣವಾಗಿರುತ್ತವೆ. ಇವರದು ಒಂಟಿದನಿ. ಇಡೀ ಕಥೆಯ ಗಟ್ಟಿ ಆಶಯವೂ, ಮಾದರಿಯೂ ಆಗುತ್ತದೆ. 

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1966ರಲ್ಲಿ (ಪುಟ: 293) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books