ಹೆಣ್ಣಿನ ಜೀವನ ಒಂದು ರೀತಿ ಜೀವನ ಪರ್ಯಂತ ಹೋರಾಟವೇ ಸೈ, ಆದರೆ ಆ ಹೋರಾಟದ ಜೀವನದಲ್ಲಿ ಅವಳೆಷ್ಟೇ ಹೊಂದಿಕೊಂಡರೂ ಅವಳಿಗೆ ಅವಮಾನಗಳಂತೂ ತಪ್ಪಿಲ್ಲಾ. ಸಂಯಮದ ಪಾಠ ಬರೀ ಹೆಣ್ಣಿಗೇಕೆ? ಪುರುಷನಿಗೇಕಿಲ್ಲಾ? ಎಂಬುದೇ ಇಂದಿಗೂ ಉತ್ತರ ಸಿಗದ ಕಾಡುವ ಪ್ರಶ್ನೆ ಎನ್ನಬಹುದು.ಲೇಖಕಿ ಸಾರಾ ಅವರು ತಮ್ಮ ಮುಸ್ಲಿಂ ಸಮುದಾಯದ ನೀತಿ ನಿಯಮಗಳು, ಕಟ್ಟುಪಾಡುಗಳು, ಸಂಕುಚಿತ ಮನೋಭಾವಗಳು, ಪದ್ದತಿ, ಆಚರಣೆಗಳು ತುಂಬಾ ಸೂಕ್ಷ್ಮವಾಗಿ ತಿಳಿಸುತ್ತಾ ಪಾತ್ರಗಳ ನಿರ್ವಹಣೆಯ ಮೂಲಕ ಹೆಣೆದ ಕಥೆಯೇ ಇಳಿಜಾರು.ಗಂಡು ಹೆಣ್ಣಿನ ಮೇಲೆ ಅನಾದಿಕಾಲದಿಂದಲೂ ದಬ್ಬಾಳಿಕೆ ಮಾಡುತ್ತಲೇ ಬಂದಿದ್ದಾನೆ, ಈ ದಬ್ಬಾಳಿಕೆ ಯಾವುದೋ ಧರ್ಮ, ಮತ, ಜಾತಿ ಪಂಗಡದಲ್ಲಿ ಮಾತ್ರವಲ್ಲಾ ಎಲ್ಲಾ ಕಡೆ ಇದೆ.ಕೆಲವೆಡೆ ಬೆಳಕಿಗೆ ಬರುತ್ತೆ ಮತ್ತೆ ಕೆಲವೆಡೆ ಬರೋಲ್ಲ.(ಹಾಗೆ ಹೆಣ್ಣನ್ನು ಗೌರವ ಭಾವದಿಂದ ನೋಡುವ ಮಂದಿಯೂ ಎಲ್ಲಾ ಸಮಾಜದಲ್ಲೂ ಇದ್ದಾರೆ) ಎರಡು ಧರ್ಮದವರಲ್ಲಿ ಎರ್ಪಟ್ಟ ಅನೈತಿಕ ಸಂಬಂಧದ ವಿವರ ಮತ್ತದರ ಪರಿಣಾಮ, ಮುಸ್ಲಿಂ ಹೆಣ್ಣಿನ ಅಂತರಾಳದ ತುಮುಲ ಮತ್ತು ಸಂಘರ್ಷದ ಬದುಕಿನ ಪುಟಗಳನ್ನು ತೆರೆದಿಟ್ಟ ಕಥಾವಸ್ತುವಿರುವ ಕಾದಂಬರಿಯೇ ಅಬೂಬಕ್ಕರ್ ಅವರ “ಇಳಿಜಾರು”
ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...
READ MORE