ಸ್ವಾತಂತ್ಯ್ರದೆಡೆಗೆ

Author : ಬಸವರಾಜ ಕಟ್ಟೀಮನಿ

Pages 237

₹ 2.00




Year of Publication: 1946
Published by: ಶಾರದಾ ಪ್ರಕಟನಾಲಯ
Address: ಅರಳೇಪೇಟೆ, ಬೆಂಗಳೂರು.

Synopsys

ಸ್ವಾತಂತ್ಯ್ರಪೂರ್ವ ಹಾಗೂ ನಂತರದ ವಿದ್ಯಮಾನಗಳಡಿ ಹುತಾತ್ಮರಾದ ವ್ಯಕ್ತಿಗಳು ಹಾಗೂ ಘಟನೆಗಳನ್ನು ಆಧರಿಸಿ ಕಾದಂಬರಿ ಬರೆದು ಓದುಗರ ಗಮನ ಸೆಳೆದ ಬಸವರಾಜ ಕಟ್ಟೀಮನಿ, ಹೋರಾಟದ ಸ್ವರೂಪ ಕುರಿತು ‘ಸ್ವಾತಂತ್ಯ್ರದೆಡೆಗೆ’ ಶೀರ್ಷಿಕೆಯ ಕಾದಂಬರಿ ರಚಿಸಿದ್ದಾರೆ. ಲೇಖಕರೇ ಹೇಳುವಂತೆ, ಇದು ಕಾದಂಬರಿಯೂ ಅಲ್ಲ; ಮಹಾಶ್ವೇತೆಯೂ ಅಲ್ಲ. ಸಾಮಾನ್ಯ ರೈತ ಯುವಕನೊಬ್ಬನ ಹೋರಾಟದ ಬಾಳಿನ ಸತ್ಯ ಕಥೆ ಇದು. ಪಾರತಂತ್ಯ್ರದ ಸಂಕೋಲೆಗಳನ್ನು ಮುರಿದೆಸೆದು, ಸ್ವಾತಂತ್ಯ್ರದೆಡೆಗೆ ಸಾಗುತ್ತಿರುವ ಭಾರತದ ಲಕ್ಷಾಂತರ ದಲಿತ ಜನತೆಯ ಆಸೆ-ಆಕಾಂಕ್ಷೆಗಳ ಚಿತ್ರಣವೂ ಹೌದು.

ಸ್ವಾತಂತ್ಯ್ರ ಹೋರಾಟವನ್ನು ಮುನ್ನಡೆಸಬಲ್ಲ ಸಾಹಿತ್ಯ ಕನ್ನಡದಲ್ಲಿಯೆ? ಸಾಮಾನ್ಯ ಜನರನ್ನು ಚೇತರಿಸುವ ದೃಷ್ಟಿ ಇಟ್ಟುಕೊಂಡು ಯಾರಾದರೂ ಸಾಹಿತ್ಯ ಸೃಷ್ಟಿಸಿದ್ದಾರೆಯೇ? ಎಂದು ಮಹಾತ್ಮ ಗಾಂಧೀಜಿ ಅವರು ಕೇಳಿದ ಪ್ರಶ್ನೆಗಳಿಗೆ ಬಸವರಾಜ ಕಟ್ಟೀಮನಿ ಅವರ ಈ ಕಾದಂಬರಿ ಸಮರ್ಥ ಉತ್ತರ ನೀಡುತ್ತದೆ. ‘ಸಾಹಿತ್ಯದಲ್ಲಿ ರಾಜಕೀಯ ಬೆರೆಸಿ ಕಲೆಯನ್ನು ಹಾಳು ಮಾಡುತ್ತಿದ್ದೀರಿ ಹುಡುಗರೆ ನೀವು’ ಎಂದು ಮೂಗು ಮುರಿಯುವ ಜನರೇ ಹೆಚ್ಚು. ಅವರ ಅರ್ಥಶೂನ್ಯ ಟೀಕೆಗಳಿಗೆ ಗಮನವಿಯದೇ ಭವಿತವ್ಯದ ಕಡೆ ದೃಷ್ಟಿ ಇಟ್ಟು ನಮಗೆ ಸರಿ ಎನ್ನಿಸಿದ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ. ನಮ್ಮ ಕರ್ತವ್ಯ ನಾವು ಮಾಡುತ್ತಿದ್ದೇವೆ’ ಎಂಬುದು.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books