ಸಮರಸವೇ ಜೀವನ

Author : ವಿ.ಕೃ. ಗೋಕಾಕ (ವಿನಾಯಕ)

Pages 576

₹ 546.00




Year of Publication: 2020
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 08362367676

Synopsys

ಕವಿ ಹಾಗೂ ಸಾಹಿತಿ ಡಾ. ವಿ.ಕೃ. ಗೋಕಾಕ (ವಿನಾಯಕ) ಅವರ ಬೃಹತ್ ಕಾದಂಬರಿ-ಸಮರಸವೇ ಜೀವನ. ಏಳು ಕಿರು ಕಾದಂಬರಿಗಳು ಬೇರೆ ಬೇರೆ ಹೆಸರಿನಿಂದ ಪ್ರತ್ಯೇಕವಾಗಿ ಪ್ರಕಟಗೊಂಡಿದ್ದರೂ ಅವು ವಸ್ತುವಿನ ಮುಂದುವರಿಕೆಯ ದೃಷ್ಟಿಯಿಂದ ಒಂದೇ ಕಾದಂಬರಿಯಡಿ ಬರುತ್ತವೆ. ಇಜ್ಜೋಡು,ಅಂತಃಸತ್ವ, ಪ್ರೀತಿಯ ಯೋಗಮಾಯೆ, ಏರಿಳಿತ, ಸಮುದ್ರಯಾನ ಹಾಗೂ ನಿರ್ವಹಣ -ಹೀಗೆ ಹೊಸ ಹೊಸ ಶೀರ್ಷಿಕೆಯಡಿ ಪ್ರಕಟಗೊಂಡು, ಸಂಯುಕ್ತವಾಗಿ ಪ್ರಕಟಿಸಿದ್ದೇ ಸಮರಸವೇ ಜೀವನ.

ಈ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥ ಪ್ರಕಾಶನ ಸಮಿತಿಯು ಮೊದಲ (1956) ಬಾರಿಗೆ ಪ್ರಕಟಿಸಿತ್ತು. .ಮೈಸೂರಿನ ಉಷಾ ಸಾಹಿತ್ಯ ಮಾಲೆಯಡಿ 1967ರಲ್ಲಿ ಈ ಕೃತಿ (1238 ಪುಟಗಳಿದ್ದವು)  ಪ್ರಕಟವಾಗಿತ್ತು. 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books