ಗುಣವಂತಿ

Author : ಕೊರಟಿ ಶ್ರೀನಿವಾಸರಾವ್

Pages 184

₹ 100.00




Year of Publication: 2007
Published by: ಆನಂದ ನಿಲಯ ಪ್ರಕಾಶನ

Synopsys

ಶ್ರೀನಿವಾಸರಾವ್ ಕೊರಟಿ ಅವರ ಐತಿಹಾಸಸಿಕ ಕಾದಂಬರಿ ‘ಗುಣವಂತಿ’. ಕಳೆದ ಶತಕದಲ್ಲಿ ಇಂಗ್ಲೀಷರ ವಿರುದ್ಧ ನಡೆಸಿದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಸರ್ವಸ್ವವನ್ನು ಬಲಿಕೊಟ್ಟು ಹುತಾತ್ಮರಾದ ಕನ್ನಡಕಲಿಗಳ ಬಗೆಗಿನ ಕಾದಂಬರಿ ಮಾಲಿಕೆಯಲ್ಲಿ 'ಗುಣವಂತಿ' ಎರಡನೆಯದು.

ಗುಣವಂತಿಯು ಕಮಲಾಸಾನಿಯ ಸಹೋದರಿ ನೀಲಾಸಾನಿಯ ಮಗಳು.ಅವಳ ಜೀವನ ಒಂದು ದುರಂತಕಥೆಯಾಗಿತ್ತು.ಕಮಲಾಸಾನಿ ಗುಣವಂತಿಗೆ ಗೆಜ್ಜೆಪೂಜೆಯನ್ನು ಮಾಡಲು ನಿರ್ಧರಿಸಿದ್ದಳು.ಇದನ್ನು ತಿಳಿದ ಗುಣವಂತಿ ತನ್ನದೇ ಆದ ಚಿಂತೆಯಲ್ಲಿ ಮುಳುಗಿದಳು.ಅವಳ ಜೀವನದಲ್ಲಿ ಪ್ರಚಂಡವಾದ ಬಿರುಗಾಳಿ ಎದ್ದಿತ್ತು.ಯಾರನ್ನು ತನ್ನ ನಿಜವಾದ ತಾಯಿಯೆಂದು ತಿಳಿದು, ಮಾತೃತ್ವದ ಅಮೃತವಾತ್ಸಲ್ಯವನ್ನು ಅನುಭವಿಸಿದ್ದಳೋ,ಅವಳೇ ಈಗ ತನ್ನನ್ನು ವೃದ್ಧನಿಗೆ ಬಲಿಯಾಗಿ ಒಪ್ಪಿಸಲು ಮುಂದೆ ಬಂದಿದ್ದಳು.ಯಾರನ್ನು ಪ್ರೀತಿಯ ದಾದಾಜಿ ಎಂದು ತಿಳಿದು ಪಿತೃವಾತ್ಸಲ್ಯದ ಕೊರತೆಯನ್ನು ಮರೆತಿದ್ದಳೋ ಅವನೇ ಈಗ ಬಲಿಪಡೆಯಲು ತಯಾರಾಗಿದ್ದನು. ದೇಸಾಯಿವಾಡೆಯ ಕರಣಿಕ ಗಂಗಾಧರನನ್ನು ವರಿಸಬೇಕೆಂಬ ಗುಣವಂತಿಯ ಕನಸೇನಾಯಿತು?,,ಇಂಗ್ಲೀಷರು ನರಗುಂದದಲ್ಲಿ ನಡೆಸಿದ ಸೂರೆಗಳಲ್ಲಿ ಸಕಲರ ಸಂಪತ್ತೂ ಹೇಗೆ ಸೂರೆಯಾಯಿತು? ಎಂಬುದರ ಸುತ್ತ ಕತೆಯನ್ನು ಹೆಣೆಯಲಾಗಿದೆ.

ಪ್ರಥಮ ಮುದ್ರಣ-1967, ದ್ವಿತೀಯ ಮುದ್ರಣ-2007

About the Author

ಕೊರಟಿ ಶ್ರೀನಿವಾಸರಾವ್
(19 October 1925 - 25 April 1983)

ಶ್ರೀನಿವಾಸರಾವ್ ಅವರು ಕನ್ನಡದ ಪ್ರಸಿದ್ದ ಕಾದಂಬರಿಕಾರರು. ಶ್ರೀಪಾದರಾವ್ ಮತ್ತು ನಾಮಗಿರಿಯಮ್ಮನವರ ಪುತ್ರನಾಗಿ ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರಲ್ಲಿ ಜನಿಸಿದರು. ಹೊಸಕೋಟೆ, ಬೆಂಗಳೂರುಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ, ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ...

READ MORE

Related Books