ಅರಳು ಮಲ್ಲಿಗೆ

Author : ಬಂಗಿ ದೊಡ್ಡ ಮಂಜುನಾಥ

Pages 416

₹ 425.00




Published by: ಯುಕ್ತ ಪ್ರಕಾಶನ
Address: ನಂ. 2109, ಮಧ್ವಾಚಾರ್ ರಸ್ತೆ, ಕೆ.ಆರ್‌. ಮೊಹಲ್ಲಾ, ಮೈಸೂರು- 570004
Phone: 9632587422

Synopsys

ಅರಳು ಮಲ್ಲಿಗೆ ಕನ್ನಡ ಸಾಹಿತ್ಯದಲ್ಲಿ ಅಪರಿಮಿತ ಓದುಗರನ್ನು ಸೃಷ್ಠಿಸಿದ ಕೀರ್ತಿ 'ಕಾದಂಬರಿ' ಪ್ರಕಾರಕ್ಕೆ ಸಲ್ಲುತ್ತದೆ. ಪದ್ಯಗಂಧಿ ಮಾದರಿಗಳನ್ನು ಹಿಂದಕ್ಕೆ ಸರಿಸಿದ ಈ ಗದ್ಯಗಂಧಿಯ ಪರಿಮಳ ಸೊಗಸು ಸವಿದಷ್ಟು ಹೊಸಗನ್ನಡದಲ್ಲಿನ ನಾವೀನ್ಯತೆಯ ವಿಸ್ತಾರವಾಗುವ ಭಾವಸ್ಪಂದಿ ಗುಣದ್ರವ್ಯಗಳ ಸಂರಚನೆ ನೂಕು ಉಳಿಸಿಕೊಳ್ಳುವ ನೋಟಗಳನ್ನು ಕೊಡುವಲ್ಲಿ ಕಾದಂಬರಿಯಷ್ಟು ಜನಪ್ರಿಯ ಮಾಧ್ಯಮ ಇರಲಿಕ್ಕಿಲ್ಲ. ಆದರೆ, ಈಗ ಕಾಲ ಹಲವು ಹೆಜ್ಜೆಗಳಲ್ಲಿ ಮುಂದೆ ಬಂದಿದೆ. ತಂತ್ರಜ್ಞಾನದ ದೃಶ್ಯ ಮಾಧ್ಯಮಗಳ ಮತ್ತು ಹರವು ತನ್ನ ಸ್ವರೂಪವನ್ನು ನುಗ್ಗಲು ಹೆಚ್ಚಿ ಓದಿನ ಸೆಳೆತ ಚಿಂತೆಯಲ್ಲಿದ್ದಂತೆ ತೋರುತ್ತದೆ. ಹನಿ ಮಿನಿ ಪಠ್ಯಗಳಲ್ಲಿನ ಎಲ್ಲೆಯಿರದ ಹಾಸ್ಯಕ್ಕೆ ಹಗುರಾಗಬೇಕೆನ್ನುವ ಒತ್ತಡ ಓದುಗರಿಗೆ ಧೀರ್ಘ ಗದ್ಯ ವದ್ಯವೆಂಬಂತಾಗುತ್ತಿದೆ. ನಿರಾಸೆಗೊಳ್ಳುವಂತೇನೂ ಇಲ್ಲ ಎಂಬ ಭರವಸೆಯ ಬೆಳ್ಳಿ ಬೆಳಕು ಈ ಗದ್ಯವಿಹಾರಕ್ಕೆ ಆಗಾಗ್ಗೆ ಮರು ಜೀವ ನೀಡುತ್ತಿರುತ್ತದೆ. ನಕ್ಕು ಆದರೂ ಇದರ ನಿದರ್ಶನವಾಗಿ ರೂಪುಗೊಂಡ ಕಂಪ್ಲಿಯ ಮಾಧ್ಯಮದ ಮಿತ್ರ ಬಂಗಿ ದೊಡ್ಡ ಮಂಜುನಾಥರ ಕಾದಂಬರಿ 'ಅರಳು ಮಲ್ಲಿಗೆ' ಘಮಲು ನಾಡಿಗರ ಮೂಗಿಗೆ ತಟ್ಟಲು ಕಾದಿದೆ.

About the Author

ಬಂಗಿ ದೊಡ್ಡ ಮಂಜುನಾಥ

ಬಂಗಿ ದೊಡ್ಡ ಮಂಜುನಾಥ ಬಿಕಾಂ ಪದವಿ ಮತ್ತು ಹಂಪಿ ಕನ್ನಡ ವಿವಿ ದೂರಶಿಕ್ಷಣದಿಂದ ಎಂ.ಜೆ.ಎಂ.ಎಸ್ ಸ್ನಾತಕೋತ್ತರ ಪದವಿಪಡೆದುಕೊಂಡಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಕೃತಿಗಳು: ತೈಲವಿಲ್ಲದ ಜ್ಯೋತಿ (ಹೇರೂರು ವಿರುಪಣ್ಣತಾತನ ಜೀವನ ಚರಿತ್ರೆ) 2018, ಕಡೆಬೆಟ್ಟ (ಕಾದಂಬರಿ) 2019, ಮಂಜು ಮಲ್ಲಿಗೆ (ಕಾದಂಬರಿ) 2021 ,ಅರಳು ಮಲ್ಲಿಗೆ (ಕಾದಂಬರಿ) 2022 ಸಂಪಾದನೆ ಕೃತಿಗಳು: ಸಿರಿಗನ್ನಡ (ಕವನ ಸಂಕಲನ) 1999, ಕಂಪ್ಲಿ (ಸಂಶೋಧನೆ ಲೇಖನಗಳ ಸಂಕಲನ) 2005. ಪ್ರಶಸ್ತಿಗಳು: ‘ಸಮಾಜ ಸೇವಾ ಭಾರ್ಗವ’ ಪ್ರಶಸ್ತಿ, ‘ಆಜೂರು ಪ್ರತಿಷ್ಠಾನ’ದ ರಾಜ್ಯ ಪ್ರಶಸ್ತಿ. ...

READ MORE

Related Books