ಸ್ವರಾಜ್ಯ ಸುಗಂಧ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 243

₹ 1.00




Year of Publication: 1938
Published by: ವೆಂಕಟೇಶ ತಿರಕೋ ಕುಲಕರಣಿ
Address: ಹಾವೇರಿ

Synopsys

ಲೇಖಕ ವೆಂಕಟೇಶ ತಿರಕೋ ಕುಲಕರಣಿ (ಗಳಗನಾಥ) ಅವರೇ  ಹೇಳುವಂತೆ ಸ್ವರಾಜ್ಯ-ಸುಗಂಧ ಕಾದಂಬರಿಯು ಐತಿಹಾಸಿಕವಾಗಿ ರಹಸ್ಯಪೂರ್ಣ ಬೋಧಪ್ರದ ಕೃತಿವಾಗಿದೆ. ಜಾತಿ ವ್ಯವಸ್ಥೆ, ರಾಜಕೀಯ, ನೀತಿ ಬೋಧೆ ಇತ್ಯಾದಿ ಅಂಶಗಳು ಕಾದಂಬರಿಯ ಮೂಲ ವಸ್ತುಗಳಾಗಿವೆ. ಬೀಜದಕಾಯಿ ಹೀಚಿನಲ್ಲಿ, ಆಗುವುದು ಆಗಿಯೇ ತೀರುತ್ತದೆ. ಸಾದ್ವಿಯ ಶಾಪ, ಸತ್ಸಂಗ ಪ್ರಭಾವ, ರಾಜನಿಷ್ಠೆಯ ವೈಭವ, ಕುಟಿಲತಂತ್ರದ ಕೊರತೆ, ಮದ್ಯದ ಮದ ಹೀಗೆ ವಿವಿಧ ಉಪಶೀರ್ಷಿಕೆಗಳಡಿ ಕಾದಂಬರಿಯ ವಿಷಯ ವಸ್ತು ತನ್ನ ಹುರಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books