ದಿಬ್ಬದ ಬಂಗಲೆ

Author : ಟಿ.ಕೆ. ರಾಮರಾವ್

Pages 154

₹ 95.00




Year of Publication: 2012
Published by: ಧೃತಿ ಪ್ರಕಾಶನ

Synopsys

ಕನ್ನಡ ಸಾಹಿತ್ಯ ಲೋಕದಲ್ಲಿ ದಿವಂಗತ ಟಿ.ಕೆ. ರಾಮರಾವ್ ಅವರದು ವಿಶಿಷ್ಟ ಹೆಸರು. ಸಾಮಾಜಿಕ ಕಾದಂಬರಿಗಳನ್ನು ಹೃದಯ ತಟ್ಟುವಂತೆ ಬರೆದು ಅಸಂಖ್ಯಾತ ಕನ್ನಡಿಗರ ಮನಗೆದ್ದ ಅವರು ಪ್ರಖರ ಜಾಣ್ಮೆಯ ಉತ್ತಮ ಗುಣಮಟ್ಟದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿ ನಾಡಿನ ಉದ್ದಗಲಕ್ಕೂ ಮನೆಮಾತಾದರು. ಟಿ.ಕೆ. ರಾಮರಾವ್ ಅವರ ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದಲು ಬಯಸುವ ದೊಡ್ಡ ಓದುವ ವರ್ಗವೇ ಇದೆ. ಇವರೆಲ್ಲರ ಮನತಣಿಸಲು ನಮ್ಮ ಪ್ರಕಾಶನ ಸಂಸ್ಥೆಯು ಟಿ.ಕೆ. ರಾಮರಾವ್ ಅವರ ಕಾದಂಬರಿಗಳನ್ನು ಆಕರ್ಷಕ ರೂಪದಲ್ಲಿ ಮತ್ತೆ ಓದುಗರ ಮುಂದಿಡಲು ಮುಂದಾಗಿದೆ. ಆಸರೆಯ ಗೊಂಬೆ, ಸರ್ಪದಂಡೆ, ಅಪರಾತ್ರಿಯ ಆತ್ಮೀಯ, ನಕ್ಷತ್ರ ಮೀನು, ಬಂಗಾರದ ಮನುಷ್ಯ, ವರ್ಣಚಕ್ರ, ಮೂರನೆಯ ಕೀಲಿ ಕೈ, ಕಪ್ಪು ಕೈ, ಕೆಂಪು ಮಣ್ಣು, ಸೀಳು ನಕ್ಷತ್ರ, ಹಿಮಪಾತ, ಆಕಾಶ ದೀಪ, ಕೋವಿ ಕುಂಚ, ಹೀಗೆ ಟಿ.ಕೆ. ರಾಮರಾವ್ ಅವರ ಅನೇಕ ಕೃತಿಗಳು ಕನ್ನಡಿಗರ ಕೈ ಸೇರಲಿವೆ.

About the Author

ಟಿ.ಕೆ. ರಾಮರಾವ್
(07 October 1931 - 11 January 1988)

ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931)  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು.  ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...

READ MORE

Related Books