ಅನ್ನದಾತ

Author : ಜಾಣಗೆರೆ ವೆಂಕಟರಾಮಯ್ಯ

Pages 304

₹ 300.00




Year of Publication: 2022
Published by: ಕಿ. ರಂ. ಪ್ರಕಾಶನ
Address: ನಂ. 173, 7ನೇ ಮುಖ್ಯರಸ್ತೆ, 24ನೇ \'ಸಿ\' ಕ್ರಾಸ್ ನಾಗರಬಾವಿ ಮುಖ್ಯರಸ್ತೆ, ಗೋವಿಂದರಾಜನಗರ, ಬೆಂಗಳೂರು - 560 079
Phone: 9844467351

Synopsys

ಕೋವಿಡ್‌ ಕಾಲಘಟ್ಟ, ಮನುಷ್ಯತ್ವವನ್ನು ಪ್ರಸ್ತುತ ಸಮಾಜ ಎಷ್ಟೊಂದು ನಿಕೃಷ್ಟವಾಗಿ ಕಾಣುತ್ತಿದೆ ಎಂಬುದನ್ನು ಬಹು ಢಾಳಾಗಿ ತೋರಿಸಿದ ಸಂದರ್ಭವೂ ಆಗಿದೆ. ಕೊರೊನಾ ಕಾಟದಲ್ಲಿ ನಗರ, ಪಟ್ಟಣ ಪ್ರದೇಶಗಳ ಗೋಳಾಟಗಳೇನೋ ಕಣ್ಣಿಗೆ ಕುಕ್ಕುವಂತೆ ಎದ್ದುಕಂಡವು. ಆದರೆ, ಗ್ರಾಮಭಾರತವನ್ನು ಬಹುವಾಗಿ ನಿರ್ಲಕ್ಷಿಸಲಾಯಿತು. ಲಾಕ್‌ಡೌನ್‌ ಜಾರಿಯಾದಾಗಲೆಲ್ಲ ರೈತರು ಬೆಳೆದ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ತಲುಪದೆ ಕೊಳೆತು ಹೋಗುತ್ತದೆ. ಬೆಳೆದ ಬೆಳೆಗಳು ಕಣ್ಣಮುಂದೆಯೇ ಮಣ್ಣು ಪಾಲಾದಾಗ ಅನ್ನದಾತನ ಕರುಳು ಚುರ‍್ರ್‌ ಎಂದಿದ್ದು ಯಾರ ಅನುಭವಕ್ಕೂ ದಕ್ಕದೇ ಹೋಯಿತು. ಇಂತಹ ಗ್ರಾಮಭಾರತ ಎಳೆ ಹಿಡಿದುಕೊಂಡ ರಚಿತವಾದ ಕಾದಂಬರಿಯೇ ‘ಅನ್ನದಾತ’.

About the Author

ಜಾಣಗೆರೆ ವೆಂಕಟರಾಮಯ್ಯ
(05 June 1949)

ಹಿರಿಯ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಜಾಣಗೆರೆಯವರು. ಓದಿದ್ದು ಬಿ.ಕಾಂ ಆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ಪತ್ರಕರ್ತರಾಗಿ  ಪ್ರಪಾತ, ನನ್ನ ನಲ್ಲ ನನ್ನ ಜನ, ಕಪ್ಪು ನ್ಯಾಯ, ದಡ, ನೆಲೆ, ಗರ, ಮಹಾನದಿ, ಮಾಯಾನಗರಿಯಲ್ಲಿ ಮಾಯಾಶಿಲ್ಲಿ, ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು, ಸವೆಯದ ಹಾದಿ, ಎದೆಯಾಳ, ಬೆಂಕಿ ಮತ್ತು ಬೆಳಕು ಇವರ ಪ್ರಮುಖ ಕೃತಿಗಳು.  ಇವರಿಗೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ, ವಿ.ಚಿ. ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ...

READ MORE

Reviews

https://www.prajavani.net/artculture/book-review/annadata-kannada-book-review-1026344.html- ಪ್ರಜಾವಾಣಿ

Related Books