ಕೂಡಲಸಂಗಮ

Author : ಲಕ್ಷ್ಮಣ ಕೌಂಟೆ

Pages 848

₹ 600.00




Year of Publication: 2019
Published by: ಬಸವಧರ್ಮ ಪ್ರಸಾರ ಸಂಸ್ಥೆ
Address: ಹಿರೇಮಠ ಸಂಸ್ಥಾನ, ಭಾಲ್ಕಿ, ಬೀದರ
Phone: 9880807864

Synopsys

ಈಗಾಗಲೇ ಕಲ್ಯಾಣದ ಶರಣ ಪರಂಪರೆಗೆ ಸೇರಿದ ಹಲವಾರು ಕೃತಿಗಳನ್ನು ರಚಿಸಿ ಶರಣರ ತತ್ವಗಳ ಕುರಿತು ಬೆಳಕು ಚೆಲ್ಲಿದ್ದಾರೆ ಕಾದಂಬರಿಕಾರ ಲಕ್ಷ್ಮಣ ಕೌಂಟೆ ಅವರು.

ಸಾಹಿತ್ಯಕ ಈ ಪಯಣದಲ್ಲಿ ಮತ್ತೊಂದು ಮಹಾ ಶರಣರ ಕೃತಿ ‘ಕೂಡಲಸಂಗಮ’. ಕಲ್ಯಾಣ ಕ್ರಾಂತಿ, ಬಸವ ನಿರ್ಗಮನದ ಹಿನ್ನೆಲೆಯಲ್ಲಿ ಕಲ್ಯಾಣದಿಂದ ಉಳವಿಯ ಕಡೆಗೆ ಬಸವತತ್ವ ಹಾಗೂ ವಚನಗಳ ರಕ್ಷಣೆಗಾಗಿ ದೀಕ್ಷೆ ತೊಟ್ಟಂತಿದ್ದ ಅಕ್ಕನಾಗಮ್ಮಳ ಜತೆ ಶರಣರ ತಂಡ ಹೊರಟಾಗ ದಾರಿಯಲ್ಲಿ ಎದುರಿಸಿದ ಅಡೆ ತಡೆ ನೋವು ಸಂಕಷ್ಟಗಳನ್ನು ಹೃದಯಂಗಮವಾಗಿ ಚಿತ್ರಿಸಿದ ಕಾದಂಬರಿ ಇದು.

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books