ಭಾಗ್ಯಲಕ್ಷ್ಮಿ

Author : ಎಂ.ವಿ. ಸೀತಾರಾಮಯ್ಯ

Pages 125




Year of Publication: 1942
Published by: ಎಸ್.ಎಸ್.ಎನ್. ಬುಕ್ ಡಿಪೋ
Address: ನ್ಯೂ ಮಾರ್ಕೆಟ್ ಬಿಲ್ಡಿಂಗ್ಸ್, ಬೆಂಗಳೂರು

Synopsys

ಮಿತ್ರ ಮೊಟಗಾನಹಳ್ಳಿ ಸುಬ್ರಮಣ್ಯ ಶಾಸ್ತ್ರಿಗಳು ಹೇಳಿದ ಕಥೆಯನ್ನು ಹಿರಿಯ ಸಾಹಿತಿ ಎಂ.ವಿ. ಸೀತಾರಾಮಯ್ಯ ಅವರು ಕಿರು ಕಾದಂಬರಿಯನ್ನಾಗಿಸಿದ ಕೃತಿ-ಭಾಗ್ಯಲಕ್ಷ್ಮಿ. ಮೈ ಬಣ್ಣ ಕಪ್ಪು ಎಂಬ ಕಾರಣಕ್ಕೆ ಪತ್ನಿಯನ್ನು ತಿರಸ್ಕರಿಸಿದ ಪತಿರಾಯ ಬಹಳ ಕಾಲದ ನಂತರ ತನ್ನ ಪತ್ನಿಯನ್ನು ಮತ್ತೆ ಮನೆಗೆ ಕರೆಯಿಸಿಕೊಳ್ಳುತ್ತಾನೆ. ಅಂದಿನಿಂದ ಮನೆಯ ಸಿರಿವಂತಿಕೆ ಏರುತ್ತಲೇ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೈ ಬಣ್ಣದ ಪಾತ್ರವೇನೂ ಇಲ್ಲ. ಆದರೆ, ಕಥಾನಾಯಕನ ಮನಸ್ಥಿತಿ ಹಾಗಿರುತ್ತದೆ. ಇದು ಉತ್ತಮ ಸಂದೇಶ ನೀಡುವ ಕಥೆ ಎಂದು ತಿಳಿದ ಲೇಖಕರು ಭಾಗ್ಯಲಕ್ಷ್ಮಿ ಕಿರು ಕಾದಂಬರಿಯನ್ನು ಬರೆದಿದ್ದಾರೆ. ಯುವಪೀಳಿಗೆಗೆ ಮಾದರಿ ಎಂದು ಆಶಿಸಿ ಕಾದಂಬರಿ ರಚಿಸಲಾಗಿದೆ, ಪಾತ್ರ-ಸನ್ನಿವೇಶಗಳನ್ನು ಕಲ್ಪಿಸಿ ರಚಿಸಿದೆ ಎಂದು ಲೇಖಕರು ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ. 

About the Author

ಎಂ.ವಿ. ಸೀತಾರಾಮಯ್ಯ
(09 September 1910 - 12 March 1990)

ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ.  ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು.  ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ  ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...

READ MORE

Related Books