ವಿಜಯೋತ್ಸವ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 208

₹ 150.00




Year of Publication: 2014
Published by: ಹೇಮಂತ ಸಾಹಿತ್ಯ
Address: # 972 ಸಿ, 62ನೇ ಅಡ್ಡರಸ್ತೆ, 10ನೇ ಮುಖ್ಯ, 63ನೇ ಅಡ್ಡರಸ್ತೆ, 4ನೇ ಎಂ. ಬ್ಲಾಕ್, 4ನೇ ಇ-ಬ್ಲಾಕ್ , ಮಂಜುನಾಥ ನಗರ, ರಾಜಾಜಿನಗರ, ಬೆಂಗಳೂರು-560010

Synopsys

ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ಐತಿಹಾಸಿಕ ಕಾದಂಬರಿ-ವಿಜಯೋತ್ಸವ. ದುರ್ಗದ ನಾಯಕರಿಗೆ ಗೊಂದಲ; ಹರಪನಹಳ್ಳಿಯವರನ್ನು ಸೋಲಿಸಬೇಕೆ ಅಥವಾ ಬೇಡವೆ ಎಂಬುದು. ಯುದ್ಧ ಬೇಡ ಎಂದು ಮನಸ್ಸು ಹೇಳುತ್ತಿದ್ದರೂ ಕೆಲವೊಮ್ಮೆ ಯುದ್ಧ ಮಾಡು ಎಂದು ಪ್ರಚೋದಿಸಿದಂತೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಮೊಘಲರು ಬೆದರಿಕೆ ಹಾಕುತ್ತಾರೆ. ಮರಾಠರು ಮೊಘಲರ ಮೇಲೆ ದಾಳಿ ಮಾಡುವ ಸಂದರ್ಭವೂ ಸಿದ್ಧವಾಗಿರುತ್ತದೆ. ಮೊಘಲರ ಪರವಾಗಿ ಒಬ್ಬ ಗಾಯಕಿಯು ಬೇಹುಗಾರಿಕೆ ನಡೆಸುತ್ತಾಳೆ. ಆದರೆ, ದುರ್ಗದ ನಾಯಕರಿಗೂ-ಸಿರ್ಯದವರಿಗೆ ಸೌಹಾರ್ದ ಬೆಸೆಯಲು ಕೊಂಡಿಯಾಗುತ್ತಾಳೆ. ಯುದ್ಧದಲ್ಲಿ ಗಾಯಾಳು ಆಗಿದ್ದ ವಿದೇಶಿಯೊಬ್ಬ ಈ ಗಾಯಕಿಯನ್ನು ಪ್ರೇಮಿಸುತ್ತಾನೆ. ಇದು ಬೇಹುಗಾರಿಕೆ ತಂತ್ರವೆಂದು ಮೊದಮೊದಲು ಸಂಶಯಿಸಿದರೂ ತದನಂತರ ಇವರ ಪ್ರೇಮವ್ಯವಹಾರವು ಬೇಹುಗಾರಿಕೆಯ ಭಾಗವಲ್ಲ ಎಂದು ತಿಳಿಯುತ್ತದೆ. ದುರ್ಗದವರು ಹಾಗೂ ಸಿರ್ಯದವರು ಒಗ್ಗೂಡಿ ಮರಾಠರನ್ನು ಸೋಲಿಸುತ್ತಾರೆ. ಇದೇ ವಿಜಯೋತ್ಸವ ಕಾದಂಬರಿಯ ಕಥಾ ವಸ್ತು.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books