ಭುಜಂಗಯ್ಯನ ದಶಾವತಾರ

Author : ಶ್ರೀಕೃಷ್ಣ ಆಲನಹಳ್ಳಿ

Pages 528

₹ 14.00




Year of Publication: 1985
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ನೃಪತುಂಗ ರಸ್ತೆ, ಕನ್ನಡ ಭವನ, ಬೆಂಗಳೂರು- 560002

Synopsys

ಭುಜಂಗಯ್ಯನ ದಶಾವತಾರ- ಕನ್ನಡದ ಸೃಜನಶೀಲ ಬರಹಗಾರ ಶ್ರೀಕೃಷ್ಣ ಆಲನಹಳ್ಳಿ ಅವರ ಪ್ರಸಿದ್ಧ ಕಾದಂಬರಿ. ಕನ್ನಡ ಕಾವ್ಯ, ಸಣ್ಣಕತೆ ಮತ್ತು ಕಾದಂಬರಿ ಪ್ರಪಂಚದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಆಲನಹಳ್ಳಿ ಕೃಷ್ಣ, ಅಕಾಲದಲ್ಲಿ ಸಾವನ್ನಪ್ಪಿದರು.

ಕಾಡು, ಪರಸಂಗದ ಗೆಂಡೆತಿಮ್ಮ ಕಾದಂಬರಿಗಳನ್ನು ನೀಡಿದ ಕೃಷ್ಣ, ಅವರ ಬಾಲ್ಯದ ಅನುಭವಗಳ ದಟ್ಟ ಸಂವೇದನೆ ಹಾಗೂ ಪ್ರಕೃತಿಯ ಅತಿ ಸೂಕ್ಷ್ಮ ವಿವರಗಳೊಡನೆ ಒಡಮೂಡಿರುವ ವಿಶೇಷ ಕೃತಿ- ಭುಜಂಗಯ್ಯನ ದಶವಾತಾರ. ಹಳ್ಳಿಗಾಡಿನ ಸಾಮಾನ್ಯನೊಬ್ಬನ ಬದುಕನ್ನು ಬಗೆಯುತ್ತಾ ಹೋಗುವ ರೀತಿ ಅಸಾಧಾರಣವೆನಿಸಿ, ಅಪೂರ್ವ ಅನುಭವವನ್ನುಂಟು ಮಾಡುತ್ತದೆ. ಆಲನಹಳ್ಳಿ ಅವರ ಕೃತಿಗಳಲ್ಲಿ ಈ ಕೃತಿ ಬಹುದೊಡ್ಡ ಪ್ರಯತ್ನವಷ್ಟೇ ಅಲ್ಲ, ಅವರ ಜೀವಂತ ಸೃಜನಶಕ್ತಿಗೆ ಸಾಕ್ಷಿಯಾಗಿದೆ.

About the Author

ಶ್ರೀಕೃಷ್ಣ ಆಲನಹಳ್ಳಿ
(03 April 1947 - 04 January 1989)

ಕವಿ-ಕತೆಗಾರ ಶ್ರೀಕೃಷ್ಣ ಆಲನಹಳ್ಳಿ ಅವರು ಜನಿಸಿದ್ದು  1947ರ ಏಪ್ರಿಲ್ 3ರಂದು. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದ ಶ್ರೀಕೃಷ್ಣ ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಇವರು ಪ್ರಮುಖರು. ಕೆಲವು ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಶ್ರೀಕೃಷ್ಣ ಅವರು ನಗರೀಕರಣ ಮತ್ತು ಆಧುನಿಕ ಆರ್ಥಿಕತೆಯ ಸ್ಪರ್ಶಕ್ಕೆ ಸಿಕ್ಕ ಗ್ರಾಮೀಣ ಬದುಕಿನ ಪಲ್ಲಟಗಳನ್ನು ಅತ್ಯಂತ ಸಹಜ ರೀತಿಯಲ್ಲಿ ತಮ್ಮ ಕಥೆ-ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಶ್ರೀಕೃಷ್ಣ ಅವರ ಕೃತಿಗಳು: ಮಣ್ಣಿನ ಹಾಡು, ಕಾಡುಗಿಡದ ಹಾಡು-ಪಾಡು, ಪ್ರಕಟಿಸಲಾಗದ ಪದ್ಯಗಳು, ಡೋಗ್ರಾ ಪಹಾಡಿ ಗೀತೆಗಳು (ಕವನ ಸಂಕಲನಗಳು). ತಪ್ತ, ಫೀನಿಕ್ಸ್ (ಕಥಾ ಸಂಕಲನಗಳು), ಕಾಡು, ಪರಸಂಗದು ...

READ MORE

Related Books