ಅಪಸ್ವರ-ಅಪಜಯ

Author : ತ್ರಿವೇಣಿ

Pages 414

₹ 90.00




Year of Publication: 2011
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-560002

Synopsys

ತ್ರಿವೇಣಿ ಅವರು ಬರೆದ ಸಾಮಾಜಿಕ ಕಾದಂಬರಿ-ಅಪಸ್ವರ-ಅಪಜಯ. ವಿಶ್ವ ಕನ್ನಡ ಸಮ್ಮೇಳನದ ಭಾಗವಾಗಿ ಕರ್ನಾಟಕ ಸರ್ಕಾರವು ಈ ಕೃತಿಯನ್ನು ಪ್ರಕಟಿಸಿದೆ. ಮೊದಲು ಅಪಸ್ವರ ಕಾದಂಬರಿ ಪ್ರಕಟವಾಗಿದ್ದು, ಇದರ ಮುಕ್ತಾಯ ಅಪೂರ್ಣವಾಗಿದೆ ಎಂದು ಬಹುತೇಕ ಓದುಗರು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅದರ ಮುಂದುವರಿದ ಭಾಗವಾಗಿ ‘ಅಪಜಯ’ ಕಾದಂಬರಿ ಬರೆದೆ. ಈ ಎರಡೂ ಕೃತಿಗಳನ್ನು ಸ್ವತಂತ್ರ ಎಂದೂ ಪರಿಗಣಿಸಬಹುದು ಎಂದು ಸ್ವತಃ ಲೇಖಕರೇ ಅಂದು ಹೇಳಿದ್ದರು.ಆದ್ದರಿಂದ, ಈ ಎರಡು ಕಾದಂಬರಿಗಳನ್ನು ಒಂದೇ ಕೃತಿಯಾಗಿ ಸರ್ಕಾರ ಪ್ರಕಟಿಸಿದೆ. 

ಹೆಣ್ಣಿನ ಕನಸುಗಳಿಗೆ ಜೀವನದಲ್ಲಿ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸುವ ಕಾದಂಬರಿ ಇದು. ಕಥಾನಯಕಿ ಮೀರಾ ತನ್ನ ಆಸೆಗೆ ವಿರುದ್ಧವಾಗಿ ವೈದ್ಯಕೀಯ ಶಿಕ್ಷಣವನ್ನು ಮೊಟಕುಗೊಳಿಸುವಳು. ಹಳ್ಳಿಯ ಜಮೀನುದಾರನ ಜೊತೆ ಮದುವೆಯಾಗುತ್ತದೆ. ಪತ್ನಿಯು ಹೊರಗೆ ಎಲ್ಲೂ ಹೋಗಕೂಡದು ಎಂಬ ಆತನ ಮನಸ್ಥಿತಿ ಸದಾ ದಬ್ಬಾಳಿಕೆಯ ಪ್ರತೀಕವಾಗುತ್ತದೆ. ಇಲ್ಲಿಯ ಪ್ರಧಾನ ಅಂಶವೆಂದರೆ, ಹೆಣ್ಣಿನ ಕನಸುಗಳಿಗೆ-ಆಶಯಗಳಿಗೆ ಬೆಲೆ ಇಲ್ಲವೇ ಎನ್ನುವುದನ್ನು ಮೀರಾಳ ಬದುಕಿನ ಮೂಲಕ ಲೇಖಕಿ ಸಮಾಜವನ್ನು ಪ್ರಶ್ನಿಸುತ್ತಾಳೆ.

ಈ ಕಾದಂಬರಿಯ ಮುಂದುವರೆದ ಭಾಗವೇ ‘ಅಪಜಯ’. ಇಲ್ಲಿಯ ಕಥಾನಾಯಕಿ ಗಟ್ಟಿಗಿತ್ತಿ. ಪತಿಯನ್ನು ಮನವೊಲಿಸಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುತ್ತಾಳೆ. ಈ ಪ್ರಕ್ರಿಯೆಯಲ್ಲಿ ಹೆಣ್ಣು ಬದಲಾಗುವ ಅನಿವಾರ್ಯತೆಯ ಸೂಕ್ಷ್ಮ ಸಂದೇಶ ಈ ಕಾದಂಬರಿ ನೀಡುತ್ತದೆ. 

About the Author

ತ್ರಿವೇಣಿ
(29 July 1963 - 05 July 1963)

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ದರಾದ ಅನುಸೂಯ ಶಂಕರ್ ರವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು.  ತಂದೆ ಬಿ.ಎಮ್. ಕೃಷ್ಣಸ್ವಾಮಿ, ತಾಯಿ ತಂಗಮ್ಮ ಇವರ ಮಗಳಾಗಿ 1928 ರ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಇವರು ಜನಿಸಿದರು. ಹೈಸ್ಕೂಲ್ ವರೆಗಿನ ಶಿಕ್ಷಣ ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಸೋದರನ ಪುತ್ರಿಯಾಗಿದ್ದ ತ್ರಿವೇಣಿಯವರು ಸ್ತ್ರೀಯರು ಹೆಚ್ಚಾಗಿ ಬರೆಯದೇ ಇದ್ದ ಕಾಲದಲ್ಲಿ ಬರವಣಿಗೆ ಪ್ರಾರಂಬಿಸಿ ಕೆಲವೇ ವರ್ಷಗಳಲ್ಲಿ ಅಸಾಧಾರಣ ಜನಪ್ರಿಯತೆಯನ್ನು ಗಳಿಸಿದರು. 1953 ರಲ್ಲಿ ತ್ರಿವೇಣಿಯವರ ಮೊದಲನೆಯ ಕಾದಂಬರಿ ಪ್ರಕಟವಾಯಿತು. ಹತ್ತು ವರ್ಷಗಳಲ್ಲಿ ...

READ MORE

Related Books