ತ್ರಿಲೋಕ ಸಂಚಾರಿ ನೀರೆ

Author : ಸವಿತಾ ಶ್ರೀನಿವಾಸ್

Pages 120

₹ 125.00




Year of Publication: 2019
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಪೊಲೀಸ್ ಅಧಿಕಾರಿಯೂ ಆಗಿರುವ ಲೇಖಕಿ ಸವಿತಾ ಶ್ರೀನಿವಾಸ ಅವರ ವೈಜ್ಞಾನಿಕ ಕಾದಂಬರಿ ’ತ್ರಿಲೋಕ ಸಂಚಾರಿ ನೀರೆ’. ಅದೊಂದು ನಗರದಲ್ಲಿ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನದೊಂದಿಗೆ ರೋಬೋಟೀಕರಣವೂ ಸೇರಿ ಬಹುತೇಕ ಕಾರ್ಯಗಳು ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿರುತ್ತವೆ. ಮೂರು ಬಗೆಯ ಸಂಚಾರ ವ್ಯವಸ್ಥೆಯಲ್ಲಿ ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗಲೇ ಸಮಸ್ಯೆ ತಲೆದೋರುತ್ತದೆ. ಸಂಚಾರಿ ವಾರ್ಡನ್, ಸಂಚಾರಿ ಎಂಜಿನಿಯರ್ ಹಾಗೂ ರೋಬಬೋಟ್ ಮಧ್ಯೆ ಸಂವಾದ -ಘರ್ಷಣೆ ನಡೆಯುತ್ತದೆ. ಅಂತಿಮ ಗೆಲುವು ಯಾರಿಗೆ ಎಂಬುದು ಕಾದಂಬರಿಯ ಕುತೂಹಲ. ಆಧುನೀಕರಣ ತಂದೊಡ್ಡುವ ಸವಾಲಿಗೆ ನಗರ ಸಜ್ಜಾಗುವ ಪರಿ, ಮುಂದೊಂದು ದಿನ ಈ ಕಲ್ಪನೆ ವಾಸ್ತವವಾಗುವ ಸಂಭವನೀಯತೆ ತಳ್ಳಿ ಹಾಕುವಂತಿಲ್ಲ. ಆದ್ದರಿಂದ, ಈ ಕಾದಂಬರಿಯು ಓದುಗರ ಚಿಂತನೆಯನ್ನು ಪ್ರೇರೇಪಿಸುತ್ತದೆ.

About the Author

ಸವಿತಾ ಶ್ರೀನಿವಾಸ್

ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು.  ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...

READ MORE

Related Books