ವಿವಾಹ ಬಂಧನ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 186

₹ 110.00




Year of Publication: 2011
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560084
Phone: 98454 49811

Synopsys

ಆಕೆ ಅನುರಾಧ ವೀಣೆ ಹಿಡಿದು ಕುಳಿತಳು ಏನು ನುಡಿಸಲೀ, ಏನು ಹಾಡಲೀ ಎಂದು ಯೋಚಿಸಿದಳು. ಅಣ್ಣ ರಘುವಿಗೆ ಬಹಳ ಇಷ್ಟವಾದ ದಾಸರ ಕೃತಿ “ಈ ಪರಿಯ ಸೊಬಗು ಇನ್ನಾವ ದೇವರೊಳು ಕಾಣೆ”. ಕಲ್ಯಾಣಿ ರಾಗರ ದೇವರನಾಮ, ವೀಣೆಯ ನುಡಿತಕ್ಕೆ ದನಿಗೂಡಿಸಿ ಮಧುರವಾಗಿ ಹಾಡಿದಳು. ಶಶಿಧರ ಎದುರಿಗೆ ಕೂತು ನಸುನಗು ಬೀರುತ್ತಿದ್ದ. ಆ ನಗುವಿನ ಭಾವ ಅನುರಾಧಳಿಗೆ ಹೊಳೆಯಿತು. ಬಹು ಕಾಲದಿಂದ ದೂರವಿದ್ದ ಎರಡು ಪ್ರೇಮಮಯ ಹೃದಯಗಳು ಒಂದಾಗಲು ಹವಣಿಸುತ್ತಿತ್ತು.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books