ಗೆದ್ದವರು ಯಾರು

Author : ದೇವುಡು ನರಸಿಂಹಶಾಸ್ತ್ರಿಗಳು

Pages 127

₹ 65.00




Year of Publication: 2013
Published by: ಇಂದಿರಾ ಪ್ರಕಾಶನ
Phone: +91 94484 6772

Synopsys

ದೇವುಡು ನರಸಿಂಹಶಾಸ್ತ್ರಿಗಳು ಅವರು ಬರೆದಿರುವ ಕಾದಂಬರಿ ಗೆದ್ದವರು ಯಾರು. ಈಶ್ವರ ದೇವಸ್ಥಾನಕ್ಕೆ ಹೋದವರು ನಂದೀಶ್ವರ ಕೊಂಬಿನ ಮೇಲೆ ಬೆರಳಿಟ್ಟು ಆ ಸಂದಿಯಿಂದ ಈಶ್ವರನ ದರ್ಶನ ಮಾಡಬೇಕು ಎಂದು ಹೇಳುವ ಒಂದು ಸಂಪ್ರದಾಯವಿದೆ. ಹಾಗೆಯೇ ಕಥೆಯನ್ನು ಓದುವಾಗ ಈ ದೃಷ್ಟಿಯಿಂದ ನೋಡಿ, ಆ ದೃಷ್ಟಿಯಿಂದ ನೋಡಿ ಓದಿ ಎಂದು ಹೇಳುವವರೂ ಇರುತ್ತಾರೆ. ನಾವು ದುಡ್ಡು ಕೊಟ್ಟುಕೊಂಡು ಕೊಂಡ ಕಥೆ ನಮಗೆ ಬೇಕಾದ ಹಾಗೆ ಓದಿಕೊಳ್ಳಲು ಯಾರದೇನಡ್ಡಿ? ಎಂದು ನಾನು ಕೂಗಾಡಿದ್ದೇನೆ. ಬಹುಶಃ ನೀವು ನನ್ನ ಹಾಗೇ ಎಂದುಕೊಂಡು, ನೀವು ನಿಮಗೆ ತೋರಿದ ರೀತಿಯಲ್ಲಿ ಓದಿಕೊಳ್ಳಿ ಎಂದು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂಬುದಾಗಿ ಲೇಖಕರೇ ಹೇಳಿದ್ದಾರೆ.

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Related Books