ಮತ್ತೊಂದು ಬಾಡದ ಹೂ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 155

₹ 86.00




Year of Publication: 2012
Published by: ಸುಧಾ ಎಂಟರ್‍ ಪ್ರೈಸಸ್
Address: #3036, 5ನೇ ಮುಖ್ಯರಸ್ತೆ, ಬಿ.ಎಸ್.ಕೆ 2ನೇ ಹಂತ, 14ನೇ ಕ್ರಾಸ್ ರೋಡ್, ತ್ಯಾಗರಾಜ್ ನಗರ, ಬೆಂಗಳೂರು-560107
Phone: 98454 49811

Synopsys

ಹಣ, ಅಂತಸ್ತುಗಳಿದ್ದರೆ ಗುಣವಿರುವುದು ವಿರಳ ಎಂಬ ಮಾತಿದೆ.ಆದರೆ ಮೇಘನಾಥರು ಗುಣದಲ್ಲೂ ಶ್ರೀಮಂತರೆಂದು ನಿರೂಪಿಸಿದ ಹೃದಯಸ್ಥ, ಮಗನ ಇಚ್ಚೆಯೇ ತಮ್ಮ ಇಚ್ಚೆಯೆಂದು ಬದುಕುವ ದಂಪತಿ,ತಾಯಿಲ್ಲದ ಮಗುವನ್ನು ಮಮತೆಯಿಂದ ಸಾಕಿದ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಮನೆಯ ಸಂಪ್ರದಾಯಕ್ಕೆ ತಕ್ಕ ವಿಭಯಾ ಎಂಬ ಮಗಳು , ಗಿಣಿಯನ್ನು ಸಾಕಿ ಹದ್ದಿನ ಕೈಗೆ ಎಲ್ಲಿ ಕೊಟ್ಟು ಬಿಡುತ್ತಾರೋ ಎಂಬ ಚಡಪಡಿಕೆ , ಅಭಿಷೇಕ್ ನ ಪ್ರೀತಿಯ ದೆಸೆಯಿಂದ ವಿಭಾಳ ಬಾಳು ಬಾಡದೆ ಮತ್ತೊಂದು ಬಾಡದ ಹೂವಾಗಿ ಅರಳಿತು ,ಹೀಗೆ ಹಲವು ವಿಷಯಗಳನ್ನು ಚರ್ಚಿಸುತ್ತಾ ಈ ಕೃತಿಯೂ ಮುಂದೆ ಸಾಗುತ್ತದೆ.ನಡೆಯ ಬಾರದ ಘಟನೆಯೊಂದು ನಡೆದು, ಬಹು ದೊಡ್ಡ ಆಘಾತವನ್ನು ವಿಭಾಳ ಬಾಳಿಗೂ ಮತ್ತು ಕುಟುಂಬಕ್ಕೂ ಏರ್ಪಡಿಸಿ ಬಿಡುತ್ತದೆ, ಅವಳು ನಿರಪರಾಧಿಯಾದರೂ ಸಮಾಜದೆದುರಿಗೆ ಅವಳೇ ತಪ್ಪಿಸ್ಥಳು, ಏನೂ ತಿಳಿಯದ ಮುಗ್ದೆ, ಹೆಚ್ಚು ಸಲಿಗೆ-ಸ್ನೇಹದಿಂದ ಯಾರೊಡನೆಯೂ ಬೆರೆಯದ ವಿಭಾಳನ್ನು ಕಂಡು ಮನ ಸೋತ ಅಭಿಷೇಕ್, ದುಡುಕಿ ಮಾಡಿದ ಕೆಲಸದಿಂದ ಅತಿಯಾದ ವ್ಯಥೆ ವಿಭಾಳಿಗೆ, ಆ ಉನ್ನತ ಅಂಗದಿಂದ ಒಳಿತನ್ನು ಮಾತನಾಡೋ ಮನುಜ, ಎಂದು ಎಷ್ಟೋ ಮಹಾನ್ ವ್ಯಕ್ತಿಗಳು ಹಾಡಿದ್ದರೂ ಕೇಳುವ  ತಾಳ್ಮೆಯಿಲ್ಲ, ಕೆಲ ಗಂಡಸರಿಗೆ ಹೆಣ್ಣು ಮಕ್ಕಳ ಕಣ್ಣೀರು ಆನಂದ ನೀಡುವಂತವು, ಅವರನ್ನು ನಾನಾ ರೀತಿಯಲ್ಲಿ ನೋಯಿಸಿ ಆನಂದಿಸುವವರೇ ಹೆಚ್ಚು, ಅಂತಹವರ ಪೈಕಿ ಯೋಗಿಯೂ , ಯಾವ ದೇವರ ಫಲವೋ, ಅಂತಹವನ ಕೈಯಿಂದ ಕೂದಲೆಳೆಯ ಅಂತರದಲ್ಲಿ ವಿಭಾ ಪಾರಾದ ಬಗೆಯು ಈ ಕಾದಂಬರಿಯಲ್ಲಿ ಮೂಡಿಬಂದಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books