ಕರುಳಿನ ಕರೆ

Author : ಶಿವರಾಮ ಕಾರಂತ

Pages 288

₹ 190.00

Buy Now


Year of Publication: 2019
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಕಾದಂಬರಿ-ಕರುಳಿನ ಕರೆ. ಅಡ್ಡಗದ್ದೆ ಸುಬ್ಬಾರಾಯರು ಶ್ರೀಮಂತರು. ಆದರೆ, ಅವರ ಗಳಿಕೆ ನ್ಯಾಯಯುತವಾಗಿರಲಿಲ್ಲ. ಸಂಬಂಧಿಕರಿಗೆ ಕೊಟ್ಟ ಹಣವನ್ನು ಯಾವುದೇ ಮುಲಾಜಿಲ್ಲದೇ ವಸೂಲಿ ಮಾಡುತ್ತಿರುತ್ತಾನೆ. ಇಂತಹವನಿಂದ ಸಾಲ ಪಡೆದಿದ್ದ ಹಿರಣ್ಯ, ಸುಬ್ಬಾರಾಯರ ವರ್ತನೆಯಿಂದ ಆಘಾತಕ್ಕೊಳಗಾಗಿ ಪಾಶ್ವವಾಯು ಪೀಡಿತನಾಗುತ್ತಾನೆ. ಇದರಿಂದ ಕಂಗೆಟ್ಟ ಹಿರಣ್ಯನ ತಂಗಿಯ ಮಗ ಲಕ್ಷ್ಮಣ, ಆತನ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಶಪಥ ಮಾಡುತ್ತಾನೆ. ಈ ಮಧ್ಯೆ,  ಕಬ್ಬಿನ ಗದ್ದೆಯಲ್ಲಿ ಸುಬ್ಬಾರಾಯರ ಕೊಲೆಯಾಗುತ್ತದೆ. ಸೋಮನಾಥ ಈ ಕೊಲೆ ಮಾಡಿರುವ ಬಗ್ಗೆ ವಾಸುದೇವರು ಸುದ್ದಿ ಹಬ್ಬಿಸುತ್ತಾರೆ.  ಲಕ್ಷ್ಮಣ ಊರಿನಲ್ಲಿರಲಿಲ್ಲ. ಈ ಕೊಲೆಗೆ ಅವನೂ ಕಾರಣ ಎಂಬ ಸಂಶವೂ ಮೂಡುತ್ತದೆ. ತನಿಖೆ-ವಿಚಾರಣೆಗಳು ನಡೆಯುತ್ತವೆ. ಲಕ್ಷ್ಮಣ ಸಹ ವಿಜಾಪುರದ ತನ್ನ ಆಸ್ತಿ ಮಾರಾಟ ಮಾಡಿ ಕಳಂಜಿಮಲೆಗೆ ಬಂದು ತಾಯಿಯೊಂದಿಗೆ ಇರುತ್ತಾನೆ. ‘ಕರುಳಿನ ಕರೆ’ ಎಲ್ಲ ಸಂಬಂಧಗಳಿಗಿಂತಲೂ ಗಟ್ಟಿಯಾದುದು ಎಂಬ ಸಂದೇಶ ಈ ಕಾದಂಬರಿಯಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1949ರಲ್ಲಿ (ಪುಟ: 264) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಲಾಗಿತ್ತು.

 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books