ದೇವರ ಜಾತ್ರೆ

Author : ನರಸಿಂಹಮೂರ್ತಿ ಹೂವಿನಹಳ್ಳಿ

Pages 150

₹ 120.00




Published by: ಪ್ರೇರಣಾ ಪ್ರಕಾಶನ
Phone: 9480583913

Synopsys

ದೇವರ ಜಾತ್ರೆ ಜನಸಾಮಾನ್ಯರ ಬದುಕಿನ ಉಲ್ಲಸಿತ ಕ್ರಿಯೆಯಾಗದೆ, ಹೀಗೆ ಅದು ಅವರ ಒಳ-ಹೊರಗಿನ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎನ್ನುವುದನ್ನು ಕಾದಂಬರಿ ಅತ್ಯಂತ ಲವಲವಿಕೆಯಿಂದ ನಿರೂಪಿಸುತ್ತಾ ಹೋಗುತ್ತದೆ. ಬಡತನ ಮತ್ತು ಸಾಲದ ಬಾಧೆಗಳನ್ನು ಬೆನ್ನಲ್ಲಿ ಧರಿಸಿಕೊಂಡ ಹಳ್ಳಿಗಳ ಬದುಕನ್ನು ಧಾರ್ಮಿಕ ಕ್ರಿಯೆಗಳು ಇನ್ನಷ್ಟು ಅಸಹನೀಯ ಗೊಳಿಸುತ್ತದದೆ. ಹಳ್ಳಿಯನ್ನು ಒಡೆಯುತ್ತದೆ. ಯುವ ಕನಸುಗಳೂ ಇದರ ಬೇಗುದಿಯಲ್ಲಿ ನಜ್ಜುಗುಜ್ಜಾಗುತ್ತದೆ. ವರ್ತಮಾನದ ಭಾರತದಲ್ಲಿ ಹಳ್ಳಿಗಳ ಪತನಗಳನ್ನು, ಅವುಗಳ ದುರಂತ ಹೆಜ್ಜೆಗಳನ್ನು ದೇವರ ಜಾತ್ರೆ ಸೂಕ್ಷ್ಮವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ. " ಹಳ್ಳಿಯ ಬದುಕಿನ ಬಿಡಿ ಚಿತ್ರಗಳ ಸಂಕಲನವಾಗಿ ಈ ಕಾದಂಬರಿ ಕಾಣುತ್ತದೆ. ಅಲ್ಲಲ್ಲಿ ಓದುಗನೊಂದಿಗೆ ನೇರವಾಗಿ ಮಾತನಾಡುವ ನಿರೂಪಕನ ಉದ್ದೇಶಗಳು ಗಂಭೀರವಾಗಿವೆ.’ ಇದು ಕೃತಿಯ ಕುರಿತಂತೆರಾಜೇಂದ್ರ ಚೆನ್ನಿಯವರ ಮಾತು.

About the Author

ನರಸಿಂಹಮೂರ್ತಿ ಹೂವಿನಹಳ್ಳಿ

ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...

READ MORE

Related Books