‘ಬ್ರಹ್ಮ’ ಲೇಖಕ ಗೋಪಾಲಕೃಷ್ಣ ಪೈ ಅವರ ಕಾದಂಬರಿ. ಕರಾವಳಿಯ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ/ತಾಳಮದ್ದಳೆಗಳ ಸ್ಪೂರ್ತಿಯಿಂದ ರಚನೆಯಾದ ಈ ಕಾದಂಬರಿ ಮಹಾಭಾರತಕ್ಕೆ ಸಂಬಂಧಿಸಿದ್ದು, ಹೆಸರೇ ಸೂಚಿಸುವಂತೆ ಇದೊಂದು ಪೌರಾಣಿಕ ಕಾದಂಬರಿ. ಇಲ್ಲಿ ಕೌಶಿಕ ಪರ್ವ, ದ್ವೈಪಾಯನ ಪರ್ವ, ಕನೋಜ ಪರ್ವ, ವ್ಯಾಸ ಪರ್ವ, ಮನು ಪರ್ವ, ತ್ರಿಶಂಕು ಪರ್ವ, ಮನು ಪರ್ವ, ಪಿಂಜಲಾ ಪರ್ವ, ವಿಶ್ವಾಮಿತ್ರ ಪರ್ವ, ಮೇನಕಾ ಪರ್ವ, ಹಾಗೂ ವಸಿಷ್ಠ ಪರ್ವ ಎಂಬ ಹತ್ತು ಪರ್ವಗಳನ್ನು ಕಾದಂಬರಿ ಒಳಗೊಂಡಿದೆ.
ಮೂಲತಃ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಮಧ್ಯೆ ಇರುವ ಪೆರ್ಲ ಮೂಲದ ಗೋಪಾಲಕೃಷ್ಣ ಪೈ ಅವರು ಕತೆ,ನಾಟಕ ,ಪ್ರಬಂದ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ಅವರ ಮತ್ತಿತರ ಕೃತಿಗಳು ಇಂತಿವೆ; ತಿರುವು, ಈ ಬೆರಳ ಗುರುತು, ಹಾರುವ ಹಕ್ಕಿಯ ಗೂಡಿನ ದಾರಿ ,ಮೊದಲಾದ ಚಿಕ್ಕ ಕಥೆಗಳು. ಆಧುನಿಕ ಚೀನೀ ಸಣ್ಣಕಥೆಗಳು, 'ಪೆರ್ಲ ಗೋಪಾಲಕೃಷ್ಣ ಪೈ'ರವರ ಸ್ವಪ್ನ ಸಾರಸ್ವತ ಕಾದಂಬರಿಗೆ 2010 ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ...
READ MORE