ಸಂಸಾರ ಸುಖ ಅಥವಾ ಲೋಕಭ್ರಮ-ವಿಲಾಸ

Author : ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)

Pages 249

₹ 2.00




Year of Publication: 1959
Published by: ಗಳಗನಾಥ ಸುರಸ ಗ್ರಂಥಮಾಲಾ
Address: ಜವಳೀಪೇಟೆ, ಧಾರವಾಡ

Synopsys

ಗಳಗನಾಥರು ಬರೆದ ಕೃತಿ-ಸಂಸಾರ ಸುಖ ಅಥವಾ ಲೋಕಭ್ರಮ-ವಿಲಾಸ. ಈ ಕೃತಿಯು ಮೊದಲು 1926 ರಲ್ಲಿ ಪ್ರಕಟಗೊಂಡಿತ್ತು. ಮೊಗಲ್ ಸಾಮ್ರಾಜ್ಯದ ಶಹಜಾದಾ ಖುಸ್ರು ಬಾದಷಹಾನ ದುರಂತ ಅಂತ್ಯವನ್ನು ಚಿತ್ರಿಸುತ್ತದೆ. ಅಮರಸಿಂಹ-ಅಜೀಂಖಾನರಿಗೆ ಖುಸ್ರುನನ್ನು ಪಟ್ಟಕ್ಕೇರಿಸುವ ಚಿಂತೆ, ಖುಸ್ರುವಿನ ಹೆಂಡತಿಗೆ ಖುಸ್ರುವಿನ ದುರ್ವ್ಯಸನಗಳ ಚಿಂತೆ, ಖುಸ್ರುವಿನ ತಾಯಿ ಜೋಧಬಾಯಿಗೆ ತನ್ನ ಮಗನ ದುಸ್ಥಿತಿಯ ಚಿಂತೆ, ದಿಲ್ಲಿಯ ಸಿಂಹಾಸನವು ತನಗೆ ದಕ್ಕಲಾರದೇನೋ ಎಂಬ ಚಿಂತೆ ಸೇಲೀಮನಿಗೆ ಹೀಗೆ ಕಾದಂಬರಿಯ ಪ್ರತಿ ಪಾತ್ರವು ಒಂದಿಲ್ಲೊಂದು ಚಿಂತೆಯಲ್ಲಿದ್ದು, ಇಡೀ ಕಾದಂಬರಿಯು ದುಃಖಮಯವಾಗಿದೆ. ಬಂಗಾಲದ ಬಾಬು ಹರಿ ಸದನ ಮುಖರ್ಜಿ ಅವರು ಬರೆದ ಈ ಕಾದಂಬರಿಯನ್ನು ಅನುವಾದಿಸಿದ್ದರೂ ಅಲ್ಲಲ್ಲಿ ನೀತಿ ಬೋಧೆಯನ್ನು ಮಾಡಲಾಗಿದೆ ಎಂದು ಅನುವಾದಕ ಗಳಗನಾಥರು ಹೇಳಿದ್ದಾರೆ.

About the Author

ಗಳಗನಾಥ (ವೆಂಕಟೇಶ ತಿರಕೋ ಕುಲಕರಣಿ)
(05 January 1869 - 22 April 1922)

ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...

READ MORE

Related Books