ತುಂಗಭದ್ರ

Author : ಎಂ.ಕೆ. ಇಂದಿರಾ

Pages 216

₹ 99.00




Year of Publication: 2008
Published by: ಇಂದಿರಾ ಪ್ರಕಾಶನ
Address: ಬೆಂಗಳೂರು

Synopsys

ಖ್ಯಾತ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಅವರ ಕಾದಂಬರಿ-ತುಂಗಭದ್ರ. ಇದು ಅವರ ಮೊದಲ ಕಾದಂಬರಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನದಿ ತೀರದ ದುಗ್ಗಾಭಟ್ಟರ ಮನೆಯ ಸುತ್ತಮುತ್ತ ಪರಿಸರದಲ್ಲಿ ಈ ಕಾದಂಬರಿ ರೂಪು ತಳೆಯುತ್ತದೆ. ಕಥಾನಾಯಕ ದುರ್ಗಾಭಟ್ಟರಿಗೆ  ಜಮೀನು, ತೋಟ, ಭೂಮಿ, ಕಾಣಿ ಎಲ್ಲವೂ ಇದ್ದು, ಪತ್ನಿ ಮರಣ ಹೊಂದಿದ್ದು, ಇದ್ದ ಮಗಳು ಸಹ ಬೇಗ ವಿಧವೆಯಾಗುತ್ತಾಳೆ. ಮಗಳು ಭಾಗಕ್ಕ, ಮೊಮ್ಮಗಳು ಕೃಷ್ಣೆಯನ್ನು ಮನೆಗೆ ಕರೆ ತಂದು ನೋಡಿಕೊಳ್ಳುತ್ತಿರುತ್ತಾರೆ. ಮುಂದೆ ಕೃಷ್ಣಿಗೂ ಮದುವೆಯಾಗಿ ಮುದ್ದುರಾಮನೊಂದಿಗೆ ಇರುತ್ತಾಳೆ. ಒಂದು ಮಗುವಿಗೆ ಜನ್ಮಕೊಟ್ಟು ಮರಣ ಹೊಂದುತ್ತಾಳೆ. ಮುಂದೆ ದುರ್ಗಾಭಟ್ಟರೂ ನಿಧನರಾಗಿ ಮುದ್ದುರಾಮನ ಸ್ಥಿತಿಯನ್ನು ವಿವರಿಸುವ ವಸ್ತು ಇಲ್ಲಿದೆ. 

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books