ಶಾಮಣ್ಣ ಮತ್ತೆ ಕುಳಿತು ಮೊದಲಿನಿಂದ ಹೇಳಿದ ಕತೆ

Author : ಕುಂ. ವೀರಭದ್ರಪ್ಪ

Pages 664

₹ 670.00




Year of Publication: 2023
Published by: ವಸಂತ ಪ್ರಕಾಶನ
Address: # 360, 10ನೇ ಬಿ ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್ ಹತ್ತಿರ, 3ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ - 560011.
Phone: 080-40917099 / 7892106719

Synopsys

‘ಶಾಮಣ್ಣ ಮತ್ತೆ ಕುಳಿತು ಮೊದಲಿನಿಂದ ಹೇಳಿದ ಕತೆ’ ಕೃತಿಯು ಕುಂ. ವೀರಭದ್ರಪ್ಪ ಅವರ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಕಾದಂಬರಿಯಾಗಿದೆ. ಈ ಕೃತಿ ಕುರಿತು ಡಾ.ಕೆ. ಮರುಳಸಿದ್ಧಪ್ಪ ಅವರು ಹೀಗೆ ಹೇಳುತ್ತಾರೆ; ಇದು ಮಹಾಕಾವ್ಯದ ರಚನಾ ವಿನ್ಯಾಸ ಹಾಗು ಆಶಯಗಳನ್ನು ಒಳಗೊಂಡಿರುವ ಆಧುನಿಕ ಕಾದಂಬರಿ. ಇಲ್ಲಿ ಬಳಕೆಯಾಗಿರುವ ಗಂಭೀರ, ಪ್ರೌಢ, ಅಲಂಕಾರಯುಕ್ತ ಭಾಷೆಗೆ ನಿರ್ದಿಷ್ಟ ಉದ್ದೇಶವಿದೆ. ಇದು ಲೇಖಕರ ಪಾಂಡಿತ್ಯ ಪ್ರದರ್ಶನವಲ್ಲ. ಕಥೆಯ ಬಹಿರಾಡಂಬರದ ಅಂತರ್ಯದಲ್ಲಿ ಹುದುಗಿರುವ ಹುಸಿಯನ್ನು ತೀಕ್ಷ್ಣವಾದ ವ್ಯಂಗ್ಯ. ವಿಡಂಬನೆಗಳಿಗೆ ಗುರಿ ಮಾಡುವುದೆ ಈ ಶೈಲಿಯ ಉದ್ದೇಶ. ಆದ್ದರಿಂದ ಇದೊಂದು ಅಣುಕು ಮಹಾಕಾವ್ಯದಂತಿದೆ. ದುರಂತ ಪ್ರಹಸನವೇ ಮನುಷ್ಯ ಜೀವನದ ನಿಜವಾದ ಸ್ವರೂಪವೆಂಬುದನ್ನು ಇಲ್ಲಿ ಪಾತ್ರಗಳ ಮೂಲಕ ಪ್ರತಿಪಾದಿಸಲಾಗಿದೆ. ಕತೆಗಾರ ಕುಂವೀ ಈ ಬೃಹತ್ ಕಾದಂಬರರಿ ಮೂಲಕ ಒಂದು ಘಟ್ಟ ಮುಟ್ಟಿದ್ದಾರೆ. ಪ್ರಯೋಗಶೀಲ ನಿರೂಪಣೆ ದೃಷ್ಟಿಯಿಂದ ಶಾಮಣ್ಣ ಒಂದು ಅಸಾಧಾರಣ ಕೃತಿ.  

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books