ಹೊಯ್ಸಳೇಶ್ವರ ವಿಷ್ಣುವರ್ಧನ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 152

₹ 90.00




Year of Publication: 2014
Published by: ಹೇಮಂತ ಸಾಹಿತ್ಯ
Address: : # 972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು

Synopsys

ಖ್ಯಾತ ಕಾದಂಬರಿಕಾರ ತ.ರಾ.ಸು (ತ.ರಾ.ಸುಬ್ಬರಾವ್) ಅವರ ಐತಿಹಾಸಿಕ ಕಾದಂಬರಿ- ಹೊಯ್ಸಳೇಶ್ವರ ವಿಷ್ಣುವರ್ಧನ. ಹೊಯ್ಸಳ ಎರೆಯಂಗ ದೇವನ ತರುವಾಯ ಪಟ್ಟಕ್ಕೆ ಬಂದ ಅವನ ಹಿರಿಯ ಮಗ ಬಲ್ಲಾಳನ ಕಾಲದಲ್ಲಿ ಅವನು ಕಾಯಿಲೆಯಿಂದ (ಹುಟ್ಟು ವ್ಯಾಧಿ) ಬಳಲುತ್ತಿರುವ ವೇಳೆಯಲ್ಲಿ ಚಾಲುಕ್ಯ ಸಾಮಂತನಾದ ಜಯಸಿಂಹ ಹೊಯ್ಸಳರ ಮೇಲೆ ದಂಡೆತ್ತಿ ಬರುತ್ತಾನೆ. ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರು, ರಕ್ಷಣೆ ನಿರೀಕ್ಷಿಸಿದ್ದ ದಿಕ್ಕಿನಿಂದ ಆಕ್ರಮಣ ಎದುರಿಸಬೇಕಾದಾಗ, ಬಲ್ಲಾಳನು ಚಾಲುಕ್ಯರ ಬೆನ್ನು ಹಿರಿತದ ದ್ರೋಹಕ್ಕೆ ಸಿಡಿದೆದ್ದು, ವ್ಯಾಧಿಯನ್ನು ಲೆಕ್ಕಿಸದೆ ಮಾಡಿದ ಹೋರಾಟ ಯುಗ ಯುಗಗಳಾಚೆಗೂ ಜನ ಮನಗಳಲ್ಲಿ ಉಳಿದಿರುವಂತದ್ದು, ಆ ಯುದ್ದದಲ್ಲಿ ಜಯಸಿಂಹನನ್ನು ಸೋಲಿಸಿ, ಸಾವಿಗಿಂತಲೂ ನೀಚವಾಗಿ ಅವಮಾನಿತನನ್ನಾಗಿ ಮಾಡಿ, ವೀರ ಬಲ್ಲಾಳನೆಂದು ಬಿರುದಾಂಕಿತನಾಗುತ್ತಾನೆ. ನಂತರ ಅವನ ಅಕಾಲಿಕ ಸಾವಿನ ತರುವಾಯ ಬಿಟ್ಟಿದೇವ (ವಿಷ್ಣುವರ್ಧನ) ರಾಜನಾಗಿ ತಲಕಾಡನ್ನು ಚೋಳರ ಆಳ್ವಿಕೆಯಿಂದ ಮುಕ್ತಗೊಳಿಸಿ, ತಲಕಾಡುಗೊಂಡ ಎಂಬ ಬಿರುದು ಪಡೆದು ಕನ್ನಡಿಗರ ಕೀರ್ತಿ ಕಳಶವಾಗಿತ್ತಾನೆ. ಕೃತಿ ಅತಿಮೋಹಕವಾಗಿದೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books