ಜನನೀ ಜನ್ಮಭೂಮಿ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 160

₹ 120.00




Year of Publication: 2020
Published by: ಸುಧಾ ಎಂಟರ್ ಪ್ರೈಸಸ್
Address: ನಂ.761,8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560 034

Synopsys

ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ ‘ಜನನೀ ಜನ್ಮಭೂಮಿ’. ಮಂಗಳ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದ ಕಾದಂಬರಿ ಇದು. ಕಾದಂಬರಿಯ ಮುನ್ನುಡಿಯನ್ನು ಖುದ್ದು ಲೇಖಕಿಯೇ ಬರೆದಿದ್ದು,ಮೆಚ್ಚಿಗೆಯ ಮಹಾಪೂರವೆ ಹರಿದು ಬಂದಿತ್ತು. ಪತ್ರಗಳ ಸಂಖ್ಯೆ ನೋಡಿ ದಿಗ್ಧಮೆಗೊಂಡಿದ್ದೆ. ರೂತ್‌ನಂಥವರ ಸಂಖ್ಯೆ ಸಾಕಷ್ಟಿರಬಹುದು! “ಕಣ್ಣೀರಿಟ್ಟವರು ಹಲವು ನೂರು ಮಂದಿ. ಸೃಷ್ಟಿಯ ಮೂಲವಾದ ಹೆತ್ತವರ ಮತ್ತು ಮಗುವಿನ ಸಂಬಂಧ ಅತ್ಯಂತ ನೈಜವಾಗಿ ಮೂಡಿಬಂದಿದೆ. ರೂತ್ ನಾನೇ ಆಗಿದ್ದೆ ನಂಗೂ ಹೆತ್ತವರ ಬಗ್ಗೆ ಗೊತ್ತಿಲ್ಲ. ಹರ್ಷಿಸಿದೆ. ಕಣ್ಣೀರಿಟ್ಟೆ, ಸಖೀಗೆ ಅಮ್ಮ ಸಿಕ್ಕಾಗ ನನಗೇ ಸಿಕ್ಕಷ್ಟು ಹರ್ಷಿಸಿದ್ದೆ. ಹತ್ತು ಸಲ, ಹಲವು ಸಲ, ನೂರು ಸಲವಾದರೂ ಓದಿದೆ” ಎಂದು ಪತ್ರ ಬರೆದವರು ಮಹಿಳಾ ವೈದ್ಯ ಆಕೆಗೂ ಹೆತ್ತವರ ಬಗ್ಗೆ ಗೊತ್ತಿಲ್ಲ! ಆದರೆ ತನಗೆ ಜನ್ಮ ಕೊಟ್ಟ ನಾಡಿನಲ್ಲಿ ಉಳಿದ ಅದೃಷ್ಟವಂತೆ. 1997ರಲ್ಲಿ ಪ್ರಥಮ ಮುದ್ರಣ ಕಂಡ ಈ ಕಾದಂಬರಿ, 2012ರಲ್ಲಿ ಎರಡನೇ ಮುದ್ರಣ ಹಾಗೂ 2020ರಲ್ಲಿ ಈ ಕಾದಂಬರಿ ಸುಧಾ ಎಂಟರ್‌ಪ್ರೈಸಸ್ ಪ್ರಕಾಶನ ಸಂಸ್ಥೆಯಿಂದ ಮರು ಮುದ್ರಣವಾಗಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books