ಮದಯ್ಯ ಮತ್ತು ವೇಣು ಅವರ ಕೊನೆಯ ದಿನಗಳು

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

Pages 125

₹ 1.00




Year of Publication: 1946
Published by: ಲಲಿತ ಸಾಹಿತ್ಯ ಮಾಲೆ
Address: ಧಾರವಾಡ

Synopsys

ಖ್ಯಾತ ಕಾದಂಬರಿಕಾರ ಭಾರತೀಸುತ ಅವರು ಬರೆದ ಕಾದಂಬರಿ-ಮದಯ್ಯ ಮತ್ತು ವೇಣು ಅವರ ಕೊನೆಯ ದಿನಗಳು. ಒಂದು ಸಣ್ಣ ಹೋಟೆಲ್ ಇಟ್ಟುಕೊಂಡಿದ್ದ ಮದಯ್ಯ ಸ್ವಾತಂತ್ಯ್ರ ಹೋರಾಟಗಾರರಿಗೆ ಸಹಾಯ ಮಾಡುತ್ತಿದ್ದ. ಅಂತಿಮವಾಗಿ ಆತನೇ ಸುತ್ತಲಿದ್ದ ಪರಿಸರದ ಹುಡುಗರಿಗೆ ನಾಯಕನಾಗಿದ್ದ ತನಗೆ ಮೋಸ ಮಾಡಿದವರನ್ನು ಉಳಿಸಲು ಹೋಗಿ ತಾನೇ ಬೆಂಕಿಯಲ್ಲಿ ಬೆಂದು ಹೋಗಿದ್ದ. ಸಾಯುವಾಗಲೂ ಆತ ಹೋರಾಟ ಮುಂದುವರಿಸಿರಿ, ಹಿಂಸೆ ಮಾತ್ರ ಬೇಡ ಎಂಬ ಸಂದೇಶ ನೀಡಿದ್ದ. ವೇಣುವಿನ ಉದಾರ ವ್ಯಕ್ತಿತ್ವ. ದಾನ ಮಾಡಿದರೂ ರಹಸ್ಯವಾಗಿರಬೇಕು ಎಂಬುದರ ಪ್ರತೀಕದಂತಿದ್ದ ಈ ಎರಡು ವ್ಯಕ್ತಿತ್ವದ ಅನಾವರಣವೇ ಈ ಕಾದಂಬರಿ. 

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books