ಅಮೃತ

Author : ಯೋಗೇಶ್ ಮಾಸ್ಟರ್‌

Pages 152

₹ 120.00




Year of Publication: 2015
Published by: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ
Address: 899, Rajatadri, 19th main road, Jnanabharathi layout, 2nd stage, Mariyappana Palya, Bangalore - 560056
Phone: 8880660347

Synopsys

ಸಾವು ಎನ್ನುವುದು ಒಂದು ಸಹಜ ಘಟನೆ ಎಂದು ಸ್ವೀಕರಿಸುವವರಿಗೆ ಅದು ಸ್ವಾಭಾವಿಕವಾದರೆ, ಅದೊಂದು ಶಿಕ್ಷೆ, ಅನಪೇಕ್ಷಿತ ಸಂತಾಪ ಎಂದು ಭಾವಿಸುವುದು ಮತ್ತೊಂದು ಧೋರಣೆ ಎನ್ನಬಹುದು. ಅಳಿದ ವ್ಯಕಿಗಳು, ಉಳಿದವರ ನೆನಪಿನಲ್ಲಿ ಕಾಡುವುದಾದರೆ ಅದು ಭಾವ ತೀವ್ರತೆಯಿಂದಲೋ, ವ್ಯಕ್ತಿಗತ ಗೌರವ ಭಾವದಿಂದಲೋ, ಸಹಜ ಮಾನವ ಸಂಬಂಧಗಳ ರೀತಿಯಿಂದಲೋ, ಅಳಿಸಲಾಗದ ಸಿಹಿಕಹಿ ಅನುಭವಗಳಿಂದಲೋ ಒಟ್ಟಿನಲ್ಲಿ ಮರೆಯಾದ ವ್ಯಕ್ತಿ ನಮ್ಮಲ್ಲಿ ಉಳಿದು ಬಿಡುತ್ತಾನೆ. ಅಳಿದ ವ್ಯಕ್ತಿಯ ಬದುಕಿನ ಸಂಕಷ್ಟಗಳು, ಜೀವನ ಕ್ರಮ, ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಯನ್ನು ಹತ್ತಿರದಿಂದ ಕಂಡು ನೊಂದ ಲೇಖಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ಅವರನ್ನು ಅಮೃತ ಎಂಬ ಈ ಪುಸ್ತಕ ಬರೆಯುವ ಮಟ್ಟಕ್ಕೆ ಕಾಡಿತು.

ಲವು ಮತ್ತು ಚೆಲುವನ್ನು ಬಲ್ಲವರಿಗೆ ಸಾವಲ್ಲಿ ನೋವಿಲ್ಲ ಎಂಬ ಮನೋಧೋರಣೆಯನ್ನು ಕಂಡುಕೊಂಡ ಲೇಖಕರಿಗೆ ಬಂಟಿ ಎಂದು ಕರೆಸಿಕೊಳ್ಳುತ್ತಿದ್ದ ಆದಿತ್ಯನ ಬದುಕಿನ ಸಾವು-ನೋವುಗಳ ಜೀವನ ಹೋರಾಟವನ್ನು ಓದುಗರಿಗೆ ನೀಡಿದರು. ಈ ಪುಸ್ತಕ ಸಾವಿನ ಬಗ್ಗೆ, ವ್ಯಕ್ತಿ ಸಂಬಂಧದ ಬಗ್ಗೆ ಬಹಳವಾಗಿ ಕಾಡುವ, ಮನಸ್ಸು ತೊಳಲಾಟಕ್ಕೆ ಬೀಳುವ ಹೊಯ್ದಾಟದ ದಾರಿಯನ್ನು ತೋರುತ್ತಲೇ ಸಾವಿನ ಭಯವನ್ನು ಸಹಜವಾಗಿಡುವ ಮನಃಸ್ಥಿತಿಯನ್ನು ನಮ್ಮಲ್ಲಿ ಸಿದ್ಧಪಡಿಸುತ್ತದೆ.

About the Author

ಯೋಗೇಶ್ ಮಾಸ್ಟರ್‌
(20 December 1968)

ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್‌ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಾವ್ಯ, ಕತೆ, ಕಾದಂಬರಿ, ಪ್ರಬಂಧಗಳು, ಸಂಶೋಧನಾ ಲೇಖನಗಳು, ನಾಟಕ, ಮಕ್ಕಳ ಸಾಹಿತ್ಯ, ಮನೋವೈಜ್ಞಾನಿಕ ಮತ್ತು ವೈಚಾರಿಕ ಲೇಖನಗಳು, ಗೀತನಾಟಕ, ಚಿತ್ರಕತೆ, ಸಂಭಾಷಣೆ ಮತ್ತು ಗೀತ ಸಾಹಿತ್ಯಗಳ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಹೆಸರಿಸಲು ಕೆಲವು, ಮರಳಿ ಮನೆಗೆ, ಜೀವನ ಸಂಜೀವನ, ಕೊನೆಯ ಅಂಕ, ಮಳೆ ಬಂದು ನಿಂತಾಗ, ಅಮೃತ, ಸಮಾನಾಂತರ ರೇಖೆಗಳು, ರಾಧೇ ಶ್ಯಾಮನ ಪ್ರೇಮ ...

READ MORE

Related Books