ನದಿ ತಿರುವು

Author : ಟಿ.ಕೆ. ರಾಮರಾವ್

Pages 107

₹ 70.00




Year of Publication: 2011
Published by: ಧೃತಿ ಪ್ರಕಾಶನ
Address: # 191/22, ಜಿ-2, 2ನೇ ಕ್ರಾಸ್, ವಿದ್ಯಾನಗರ, ಕುರುಬರಹಳ್ಳಿ ಮುಖ್ಯರಸ್ತೆ, ಪಿ. ಅಂಡ್ ಟಿ. ಎಂಪ್ಲಾಯಿಸ್ ಕಾಲೋನಿ, ಬೆಂಗಳೂರು-86
Phone: 9845313583

Synopsys

ಖ್ಯಾತ ಕಾದಂಬರಿಕಾರ ಟಿ.ಕೆ. ರಾಮರಾವ್ ಅವರ ಕಾದಂಬರಿ-ನದಿ ತಿರುವು. ನದಿಯ ಸಹಜ ನಡೆಯನ್ನು ತಡೆಯುವುದು ಪ್ರಕೃತಿ ವಿರುದ್ಧ ಕ್ರಮವಾಗುತ್ತದೆ. ಪ್ರಕೃತಿ ವಿರುದ್ಧ ನಡೆಯು ಯಾವಾಗಲೂ ಮಾನವನ ಪ್ರಗತಿ ವಿರೋಧವೇ ಆಗಿರುತ್ತದೆ. ಹೀಗಾಗಿ, ಬದುಕಿನ ಸಣ್ಣ ಸಣ್ಣ ತಿರುವುಗಳು ಬದುಕಿನ ಸ್ವರೂಪವನ್ನೇ ಬದಲಿಸುತ್ತಿರುತ್ತವೆ. ಆದ್ದರಿಂದ, ಎಚ್ಚರಿಕೆ ಅಗತ್ಯ. ನದಿಯ ತಿರುವಿನಲ್ಲಿ ಸೆಳವು ಹೆಚ್ಚಿರುತ್ತದೆ. ಈ ಸೆಳವಿನಲ್ಲಿ ಸಿಕ್ಕು ಪಾರಾಗಿ ಬರುವ ಸಾಧ್ಯತೆ ಕಡಿಮೆ. ಬದುಕಿನ ಒತ್ತಡಗಳ ಮಧ್ಯೆ ಸಿಕ್ಕವರು ಒತ್ತಡಗಳನ್ನು ಸಹಿಸಿಯೂ ಹೇಗೆ ಬದುಕನ್ನು ಸಮರ್ಥವಾಗಿ ಜಯಿಸಬೇಕು ಎಂಬ ಒಳಾರ್ಥವಿರುವ ಕಥಾವಸ್ತುವನ್ನು ಈ ಕಾದಂಬರಿ ಹೊಂದಿದೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಟಿ.ಕೆ. ರಾಮರಾವ್
(07 October 1931 - 11 January 1988)

ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931)  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು.  ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...

READ MORE

Related Books