ಪ್ರೀತಿಯ ಹೂಬನ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 184

₹ 120.00




Year of Publication: 2013
Published by: ಸುಧಾ ಎಂಟರ್ ಪ್ರೈಸಸ್
Address: ನಂ.761,8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560 034

Synopsys

ಕಾದಂಬರಿಗಾರ್ತಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ ‘ಪ್ರೀತಿಯ ಹೂಬನ’. ಇದೊಂದು ವಿಭಿನ್ನವಾದ ಕಥಾವಸ್ತು, ವಿಭಿನ್ನ ಪಾತ್ರ ಹರೀಶನದ್ದು.

ಲೇಖಕಿಯೇ ಕೃತಿಯ ಬೆನ್ನುಡಿಯಲ್ಲಿ ಬರೆದಂತೆ, ನೀವು ಕಷ್ಟದ ಸಮಯದಲ್ಲಿ, ಇಲ್ಲ ಯಾವುದೋ ಕ್ಲಿಷ್ಟವಾದ ಸಮಸ್ಯೆಯಲ್ಲಿ ಮುಳುಗಿರುವ ನೀವು ಏನು ಮಾಡುತ್ತೀರಾ? ನನ್ನ ಪ್ರೀತಿಯ ಓದುಗರು ಇಂಥದೊಂದು ಪ್ರಶ್ನೆಯನ್ನು ನನ್ನ ಮುಂದಿಟ್ಟಿದ್ದಾರೆ. ನನ್ನ ಕಾದಂಬರಿಗಳ ಪಾತ್ರಗಳು ಕೂಡ ಇಂಥ ಸಮಯಗಳಲ್ಲಿ ಹೇಗೆ ವರ್ತಿಸುತ್ತವೆ? ಉತ್ತರ ಸರಳವೆನಿಸಿದರು ತೀರಾ ಸೂಕ್ಷ್ಮವಾದದ್ದು. ಆಗ ನನಗೆ ನೆನಪಾಗುತ್ತಿದ್ದುದು ನಮ್ಮ 'ಮಂಕು ತಿಮ್ಮ' ನ ಕರ್ತೃವಾದ ಡಿ.ವಿ.ಜಿ.ಯವರ ಕಗ್ಗದ ಸಾಲುಗಳು 'ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ | ಜೀವನ ಪರೀಕ್ಷೆ ಬಂದಿದಿರು ನಿಲುವತನಕ | ಭಾವಮರ್ಮಂಗಳೇಳುವುವಾಗ ತಳದಿಂದ | ದೇವರೇ ಗತಿಯಾಗ - ಮಂಕುತಿಮ್ಮ ' ಈ ಜಗತ್ತಿನಲ್ಲಿ ಎಲ್ಲರೂ ಸಾಧುಸಂತರೇ ಮತ್ತು ಉಪದೇಶಕರೇ, ಆದರೆ ಯಾವಾಗ ಜೀವನದಲ್ಲಿ ಒಂದು ಕಡು ಕಷ್ಟಕರ ಪರೀಕ್ಷೆ ಎದುರಾಗುವುದೋ ಆಗ ಅವನ ಅಂತರಂಗದ ಭಾವನೆಗಳು ವ್ಯಕ್ತವಾಗುತ್ತದೆ. ಆಗ ಅವನನ್ನ ದೇವರೇ ಕಾಪಾಡಬೇಕು. ಇದೇ ಬದುಕಿನ ಒಳಾರ್ಥ. ಆದರ್ಶವು ಕೂಡ ಅಂತರಂಗದ ನೈತಿಕ ನಂಬುಗೆಗಳನ್ನ ಅನೇಕ ಸಲ ಮೀರಲಾಗುವುದಿಲ್ಲ ಎಂದ್ದಾರೆ.

ಈ ಕಾದಂಬರಿ1986ರಲ್ಲಿ ಮೊಲದ ಮುದ್ರಣ ಕಂಡ ಕಾದಂಬರಿಯು, 1992ರಲ್ಲಿ ಎರಡನೇ ಮುದ್ರಣ, 2007ರಲ್ಲಿ ಮೂರನೇ ಮುದ್ರಣ ಕಂಡಿದೆ. 2013ರಲ್ಲಿ ನಾಲ್ಕನೇ ಮುದ್ರಣ ಕಂಡಿದೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books