ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಚರ್ಚೆಗಳಾಗುತ್ತಿರುತ್ತೆ. ನಲುಗುವ ನೂರಾರು ಸ್ತ್ರೀಯರು ಇದ್ದಾರೆ. ಅವರ ಪರ ಖಂಡಿತ ಸಮಾಜದ ಸಹಾನೂಭೂತಿ ಇದೆ. ಆ ಬಗ್ಗೆ ಕಾಯ್ದ ಕಾನೂನುಗಳು ಇವೆ. ಜೊತೆಗೆ ಹೆಣ್ಣಿನಿಂದ ಹೆಣ್ಣು ಶೋಷಣೆಗೆ ಒಳಗಾಗುತ್ತಿರುವುದು ನಾವು ಕಾಣುತ್ತಿದ್ದೇವೆ. ಅತ್ತೆ, ಸೊಸೆ, ನಾದಿನಿ, ಅತ್ತಿಗೆ, ಜೊತೆಗೆ ಗಂಡ, ಗೆಂಡತಿಯ ಮದ್ಯೆ ಬೇರೊಂದು ಹೆಣ್ಣಿನ ಪ್ರವೇಶ. ಹೆಣ್ಣಿನ ಶೋಷಣೆಯಲ್ಲಿ ಹೆಣ್ಣೇ ಪ್ರಬಲ ಪಾತ್ರವಾಗುತ್ತಾಳೆ. ದೈಹಿಕ ಹಿಂಸೆಯಾದರು ಕಣ್ಣಿಗೆ ಕಾಣುವ ಹಾಗೆಯೆ ಆಗುತ್ತೆ. ಆದರೆ... ಮಾನಸಿಕ ಹಿಂಸೆ, ಹಿಂಸೆ....ಹಿಂಸೆಯೇ! ಅಂಜಲಿ ಅಂಥವರ ಬಗ್ಗೆ ಏನು ಹೇಳೋಣ? ಹೆಣ್ಣಿನಿಂದಲೆ ಶೋಷಣೆಗೊಳಗಾದ ಮತ್ತೊಬ್ಬ ಹೆಣ್ಣಿನ ನೋವನ್ನು ಈ ಕಾದಂಬರಿ ಎಳೆ ಎಳೆಯಾಗಿ ಬಿಚ್ಚಿಡುತ್ತದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...
READ MORE