ಆಶಾ ಕಿರಣ (ಕಾದಂಬರಿ)

Author : ಎಂ.ಜಿ. ದೇಶಪಾಂಡೆ

Pages 204

₹ 150.00




Year of Publication: 2011
Published by: ಪೂಜಾ ಪ್ರಿಂಟರ್ಸ್
Address: ಬಚ್ಚಾ ಕಾಂಪ್ಲೆಕ್ಸ್ , ಸಂಗಮ ಚಿತ್ರಮಂದಿರ ಹತ್ತಿರ, ಬೀದರ-585401
Phone: 9964511663

Synopsys

ಖ್ಯಾತ ಹಿರಿಯ ಲೇಖಕ ಡಾ. ಎಂ.ಜಿ ದೇಶಪಾಂಡೆ ಅವರ ಸಾಮಾಜಿಕ ಕಾದಂಬರಿ-ಆಶಾಕಿರಣ. ಸೀಮಿತ ಪಾತ್ರಗಳಿರುವ ಕಾದಂಬರಿ ಇದು. ಒಂದು ಕಡೆ ಆದರ್ಶ ಇನ್ನೊಂದೆಡೆ ಜವಾಬ್ದಾರಿ ಮತ್ತೊಂದೆಡೆ ಮನಸ್ಸಿನ ತುಮುಲಾದ ಪ್ರೀತಿ ಕಾದಂಬರಿಯ ನಾಯಕ ಕಿರಣನಿಗೆ ಕಾಡಿದರೆ, ಎಳೆ ಮನಸ್ಸು ನಾಯಕಿ ಆಶಾಳಿಗೆ ಪ್ರೀತಿಯ ಬಲೆಯಲ್ಲಿ ಸಿಕ್ಕಿ ನರಳಿ ಸಾಯುವಂತೆ ಮಾಡುತ್ತದೆ .ಒಟ್ಟಿನಲ್ಲಿ, ಬಾಳಿನ ವಿವಿಧ ಮಗ್ಗಲುಗಳು ನಡುವೆಯೂ ಪ್ರೀತಿ ಯಾವ ರೀತಿಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗಿ ನಿಲ್ಲುತ್ತದೆ .ಹೀಗೆ ವಿವಿಧ ವಿಚಾರಗಳನ್ನು ತುಂಬಿಕೊಂಡ ಈ ಕಾದಂಬರಿಯು ತನ್ನ ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

About the Author

ಎಂ.ಜಿ. ದೇಶಪಾಂಡೆ
(21 March 1952)

ಲೇಖಕ ಎಂ. ಜಿ. ದೇಶಪಾಂಡೆ (ಮಾಣಿಕರಾವ್ ಗೋವಿಂದರಾವ್ ದೇಶಪಾಂಡೆ) ಮೂಲತಃ  ಬೀದರನವರು. ಎಂ..ಫಿಲ್ ಹಾಗೂ ಪಿಎಚ್ ಡಿ ಪದವೀಧರರು.  ಇವರ ಕಾವ್ಯನಾಮ  ಲಕ್ಷ್ಮೀಸುತ. ಮಾಣಿಕ್ಯ ವಿಠಲ ಎಂಬುದು ಇವರ ವಚನಾಂಕಿತ. ತಂದೆ ಗೋವಿಂದರಾವ್ ದೇಶಪಾಂಡೆ, ತಾಯಿ ಲಕ್ಷ್ಮೀಬಾಯಿ ದೇಶಪಾಂಡೆ, ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ.  ಕನ್ನಡಾಂಬೆ ಮತ್ತು ಖ್ಯಾತಿ (1977) ಕನ್ನಡ ವಾರ ಪತ್ರಿಕೆಯ ಸಂಪಾದಕ ರಾಗಿದ್ದರು. ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು, ಶಾಂತಿ, ಕನ್ನಡ ಗೆಳೆಯರ ಬಳಗ, ಬೀದರ ಜಿಲ್ಲಾ ಲೇಖಕರ ಬಳಗ, ಜ್ಞಾನ ತರಂಗ ವಿಚಾರ ವೇದಿಕೆ ಮುತ್ತಂಗಿ, ಮಂದಾರ ಕಲಾವಿದರ ವೇದಿಕೆ ಹೀಗೆ ಹಲವಾರು ಸಂಘಸಂಸ್ಥೆಗಳ ರೂವಾರಿಯಾಗಿದ್ದಾರೆ.  ಕೊರೊನಾ ವೈರಸ್ ಪರಿಣಾಮ ಲಾಕ್ ...

READ MORE

Related Books