ಅದೇ ಊರು ಅದೇ ಮರ

Author : ಶಿವರಾಮ ಕಾರಂತ

Pages 303

₹ 180.00




Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಅದೇ ಊರು, ಅದೇ ಮರ-ಈ ಕಾದಂಬರಿಯನ್ನು ಡಾ. ಕೆ. ಶಿವರಾಮ ಕಾರಂತರು ರಚಿಸಿದ್ದಾರೆ. ವಟಪುರವೆಂಬ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಹಳ್ಳಿ ಸ್ವಾತಂತ್ಯ್ರಪೂರ್ವದಿಂದ ಸ್ವಾತಂತ್ಯ್ರ ನಂತರದ ನಾಲ್ಕೈದು ದಶಕಗಳಲ್ಲಿ ಯಾವೆಲ್ಲ ಸ್ಥಿತ್ಯಂತರಗಳನ್ನು ಹಾಗೂ ಮೂರು ತಲೆಮಾರುಗಳಲ್ಲಿ ಜನಜೀವನದ ಮೌಲ್ಯಗಳಲ್ಲಿ ಉಂಟಾದ ಕಾಲಕಾಲದ ಬದಲಾವಣೆಯನ್ನುಕಂಡಿತು ಎಂಬುದರ ಚಿತ್ರಣವಿದೆ. ಆ ಊರಿನ ಹೆಸರಿಗೆ ಕಾರಣವಾದ ವಟವೃಕ್ಷ ಪುರಾತನ ವೈಭವವನ್ನು ಸಾರುತ್ತದೆ. ಒಂದು ಎಕರೆ ಜಮೀನನ್ನು ಆವರಿಸುವಷ್ಟು ಜಾಗದಲ್ಲಿ ಪಕ್ಷಿಗಳಿಗೆ ನಿಶ್ಚಿಂತ ಆವಾಸವನ್ನೂ ಒದಗಿಸುತ್ತದೆ. ವಟಪುರದ ತಲೆಮಾರಿನ ಜನರು ದಾನ, ಧರ್ಮ , ದೇವರು, ನಂಬಿಕೆಗಳ ನೆರಳಿನಲ್ಲಿ ಬದುಕನ್ನು ಸಾಗಿಸುತ್ತಾರೆ. ಊರಿಗೆ ಆಪತ್ತು ಬಂದಾಗ ಜಾತಿ, ಮತ , ಬಡವ, ಶ್ರೀಮಂತರೆನ್ನದೆ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸುತ್ತಾರೆ. ಹೀಗೆ ವಟಪುರದ ಮುಂದಿನ ತಲೆಮಾರಿನ ಕಥೆ ಈ ಕಾದಂಬರಿಯು ಹೇಳುತ್ತ ಸಾಗುತ್ತದೆ. ಒಂದು ದಿನ ಗೋಳಿಮರದ ಅಳಿದುಳೀದ ಕಾಂಡ, ಬೇರುಗಳೂ ಕಣ್ಮರೆಯಾಗುತ್ತವೆ. ಅಲ್ಲೊಂದು ಆಲದ ಮರ ಇತ್ತು ಎಂಬುದರ ಗುರುತೇ ಇರುವುದಿಲ್ಲ. ಸಂಜೆಯ ಹೊತ್ತು ನಾಲ್ವರು ಮುದುಕರು ಈ ಸ್ಥಳಕ್ಕೆ ಬಂದು ಶಾಪ ಹಾಕುತ್ತಾರೆ. ಅವುಗಳನ್ನು ಕಡಿದು ಹೊತ್ತೊಯ್ದವರ ಸುಳಿವು ಸಿಗದು. ಕಾಲಕ್ರಮೇಣ ಅವನತಿಗೆ ಸಾಗುತ್ತಿರುವ ಇಂದಿನ ತಲೆಮಾರಿನ ಜನತೆಯ ಸ್ಪಷ್ಟ ಚಿತ್ರಣ ನೀಡುತ್ತದೆ ಈ ಕಾದಂಬರಿ.

ಬೆಂಗಳೂರಿನ ರಾಜಲಕ್ಷ್ಮಿ ಪ್ರಕಾಶನವು 1977ರಲ್ಲಿ (ಪುಟ: 329) ಈ ಕಾದಂಬರಿಯನ್ನು ಮೊದಲು ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books