ಒಳ್ಕಲ್ಲ ಒಡಲು

Author : ಕಾವ್ಯಶ್ರೀ ಮಹಾಗಾಂವಕರ

Pages 216

₹ 200.00




Year of Publication: 2018
Published by: ಸಾಂಗತ್ಯ ಪ್ರಕಾಶನ
Address: ವೆಂಕಟರಮಣ ದೇವಸ್ಥಾನದ ಹತ್ತಿರ , ಹಳೆಯ ಪಂಚಾಯತ್ ರಸ್ತೆ, ಕಾರಟಗಿ-583229, ಕೊಪ್ಪಳ ಜಿಲ್ಲೆ
Phone: 9448358040

Synopsys

ಲೇಖಕಿ ಕಾವ್ಯಶ್ರೀ ಮಹಾಗಾಂವಕರ (ಸಿಕಾ) ಅವರ ಕಾದಂಬರಿ-ಒಳ್ಕಲ್ಲ ಒಡಲು. ನೊಂದವರ ನೋವ...ಎಂಬ ಉಪಶೀರ್ಷಿಕೆಯನ್ನು ಹೊಂದಿದ್ದು, ಸಾಮಾಜಿಕ ವಿಷಯ ವಸ್ತುವನ್ನು ಒಳಗೊಂಡಿದೆ. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.

ಸಾಹಿತಿ ನಾ. ಮೊಗಸಾಲೆ ಅವರು ಕೃತಿಗೆ ಬೆನ್ನುಡಿ ಬರೆದು ‘ಬದುಕು ಕಠಿಣ, ನರಕ ಅನಿಸುವಂತೆ ಮಾಡುವ ಮನುಷ್ಯನ ಮನಸ್ಥಿತಿಗೆ ಎಲ್ಲರೂ ಅನಗತ್ಯ ಬಲಿ. ಮನಸ್ಸಿನ ವಿಕಾರ, ಅನುಮಾನ, ಅವಮಾನಗಳಲ್ಲಿ ಒದ್ದಾಡುವ ಜೀವಕ್ಕೆ ನೆಮ್ಮದಿಯೇ ಮಾಯ. ಅದೇ ಬದುಕಿನ ಮಾಯಾ. ಪುರುಷ ಪ್ರಧಾನ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಈ ಕಾದಂಬರಿಯು ಹೆಣ್ಣಿನ ಶೋಷಣೆ, ತವಕ-ತಲ್ಲಣ-ಆತಂಕಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ಈ ಬದುಕೇ ನರಕ ಎಂದುಕೊಳ್ಳುವ ನೇತಾತ್ಮ ಧೋರಣೆಯಿಲ್ಲದ ಹೊಸ ಆಲೋಚನೆ, ಬೇಕಾದ್ದನ್ನು ದಕ್ಕಿಸಿಕೊಳ್ಳಲು ಮನಸು ಮಾಡಿ ಹೊರ ಬರಬೇಕು. ಓದಿಸಿಕೊಂಡು ಹೋಗುವ ಧಿಮಾಕು ಇಲ್ಲಿದೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಕಾವ್ಯಶ್ರೀ ಮಹಾಗಾಂವಕರ
(11 April 1969)

ಲೇಖಕಿ, ಕಾವ್ಯಶ್ರೀ ಮಹಾಗಾಂವಕರ‌ ಮೂಲತಃ ಬೀದರನವರು. ‘ಸಿಕಾ’ ಎಂಬುದು ಇವರ ಕಾವ್ಯನಾಮ. ತಂದೆ  ಬಿ.ಜಿ.ಸಿದ್ದಬಟ್ಟೆ, ತಾಯಿ ಯಶೋದಮ್ಮ ಸಿದ್ದಬಟ್ಟೆ. ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ.  ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ಬೀದರಿನ ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮಾಧ್ಯಮಿಕ ಹಾಗೂ ಪದವಿಪೂರ್ವ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವೀಧರೆ. . ಕೃತಿಗಳು: 'ಪ್ರೇಮ ಕಾವ್ಯ' (2006) ಕಾದಂಬರಿ, 'ಬೆಳಕಿನೆಡೆಗೆ' (2008) ಕಥಾ ಸಂಕಲನ , ಪ್ರಳಯದಲ್ಲೊಂದು ಪ್ರಣತಿ' (2013) ಕಥಾ ಸಂಕಲನ, 'ಜೀವಜಗತ್ತಿಗೆ ಜೇನಹನಿ' (2015) ವಿಮರ್ಶಾ ಬರಹ , ಪಿಸುಮಾತುಗಳ ...

READ MORE

Related Books