ಮಾಲತೀ

Author : ಬಿ. ವೆಂಕಟಾಚಾರ್ಯ

Pages 47

₹ 0.00




Year of Publication: 1913
Published by: ಬಿ.ವೈ.ನರಸಿಂಹೈಯ್ಯಂಗಾರ
Address: ಮೈಸೂರು

Synopsys

ನರಸಿಂಹರಾಜ ಒಡೆಯರ ಸರಣಿ ಮಾಲಿಕೆಯಡಿ ಬಿ.ವೆಂಕಟಾಚಾರ್ಯ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ ಕಿರು ಕಾದಂಬರಿ-ಮಾಲತೀ. ಸ್ವರ್ಣಕುಮಾರಿ ದೇವಿ ಅವರು ಬಂಗಾಳಿ ಸಾಹಿತ್ಯದಲ್ಲಿ ಪ್ರಖ್ಯಾತರು. ಕಥಾವಸ್ತು ಚಿಕ್ಕದಾದರೂ ಮನೋಹರವಾಗಿದೆ. ಮನುಷ್ಯ ಹೃದಯದಲ್ಲಿ ನಡೆಯುವ ಸೂಕ್ಷ್ಮ ವ್ಯಾಪಾರಗಳು ಅತಿಯಾಗಿ ವಿವರಿಸಲ್ಪಟ್ಟಿವೆ. ಆದ್ದರಿಂದ, ಈ ಕೃತಿಯನ್ನು ಅನುವಾದ ಮಾಡಿದ್ದಾಗಿ ಲೇಖಕರು ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

About the Author

ಬಿ. ವೆಂಕಟಾಚಾರ್ಯ

ಅನುವಾದಕ, ಕಾದಂಬರಿಕಾರ ಬಿ. ವೆಂಕಟಾಚಾರ್ಯ ಅವರು ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾರಣರಾದವರು. ಚಾಮರಾಜನಗರ ತಾಲ್ಲೂಕು ಕೊಳ್ಳೆಗಾಲದಲ್ಲಿ 1845ರಲ್ಲಿ ಜನಿಸಿದ ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಬಂಗಾಳಿ ಬರಹಗಾರ ಬಂಕಿಮಚಂದ್ರರ ಕಾದಂಬರಿಗಳನ್ನು ಕನ್ನಡ ಜನತೆಗೆ ಪರಿಚಯಿಸಿದವರಲ್ಲಿ ಇವರೇ ಮೊದಲಿಗರು. ಕನ್ನಡಿಗರ ವಾಚನ ಅಭಿರುಚಿಗಳು ಬೆಳೆಯಲು ಗಟ್ಟಿಯಾದ ತಳಹದಿ ಹಾಕಿದ ಅವರು ಅಪ್ರತ್ಯಕ್ಷ ಗುರುವಾದ ಈಶ್ವರಚಂದ್ರ ವಿದ್ಯಾಸಾಗರರ `ಭ್ರಾಂತಿವಿಲಾಸ'ವೇ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಇದು ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಮೊದಲ ಗ್ರಂಥ. ಈ ಗ್ರಂಥವನ್ನು ಮದರಾಸು ವಿಶ್ವವಿದ್ಯಾಲಯ ಪಠ್ಯಪುಸ್ತಕವಾಗಿ ಅಂಗೀಕರಿಸಿದ್ದರಿಂದ ...

READ MORE

Related Books