ತಥಾಗತ

Author : ಸಂಪನ್ನ ವಿ. ಮುತಾಲಿಕ

Pages 350

₹ 350.00




Year of Publication: 2019
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್‌ ಬೀದಿ, ಹುಬ್ಬಳ್ಳಿ - 580020
Phone: 9448110034

Synopsys

ಹೊಯ್ಸಳರ ಕಾಲದಲ್ಲಿ ಬರುವ ಪೂರ್ಣಾನಂದರು, ಅವರ ಮಗ ವರದರಾಜ, ಜೈನ ಸೈನ್ಯಾಧಿಕಾರಿ ಭರತೇಶ್ವರನ ಮಗಳು ಯಶೋದಾ, ಜೈನ ಸನ್ಯಾಸಿ ಜಿನದತ್ತ, ಪೂರ್ಣಾನಂದರ ಮಡದಿ ನೀಳಾದೇವಿ ಅವರ ಪಾತ್ರಗಳನ್ನಿಟ್ಟುಕೊಂಡು ಲೇಖಕರು ಆಧುನಿಕ ಕಾಲಘಟ್ಟದ ತೆಕ್ಕೆಗೆ ಇಟ್ಟು 'ತಥಾಗತ’ ಕಾದಂಬರಿಯನ್ನು ಹೆಣೆದಿದ್ದಾರೆ. ಅಂದಿನ ಕಾಲದ ಧಾರ್ಮಿಕ, ಸಾಂಸ್ಕೃತಿಕತೆಯನ್ನು ಆಧುನಿಕತೆಗೆ ತೆಗೆದುಕೊಂಡು ಚಿತ್ರಿಸಿದ್ದಾರೆ. ಧರ್ಮ ಮತ್ತು ವರ್ಣಗಳ ಜೀವನ ದೃಷ್ಠಿಯ ಕುರಿತು ಸಮಗ್ರ ವಿವರವನ್ನು ಇಲ್ಲಿ ನೀಡಲಾಗಿದೆ.

About the Author

ಸಂಪನ್ನ ವಿ. ಮುತಾಲಿಕ

ಲೇಖಕ ಸಂಪನ್ನ ವಿಜಯರಾವ್‌ ಮುತಾಲಿಕ ಅವರು ಮೂಲತಃ ದಾವಣಗೆರೆಯವರು. ಇಂಜಿನಿಯರಿಂಗ್‌ ಓದುತ್ತಿರುವಾಗಲೇ ಸಂಗೀತ, ನಾಟಕ, ಏಕಪಾತ್ರಾಭಿನಯ, ಪ್ರಹಸನ, ಚರ್ಚಾಸ್ಪರ್ಧೆ -ಹೀಗೆ ಹಲವಾರು ರಾಜ್ಯಮಟ್ಟದ ಲಲಿತಕಲೆಗಳ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರೊ. ಚಂದಶೇಖರ ಪಾಟೀಲರು ಬರೆದ ‘ಕುಂಟಾ ಕುಂಟಾ ಕುರುವತ್ತಿ’ ನಾಟಕದ ನಿರ್ದೇಶನ ಮಾಡಿದ್ದು, ‘ನಾವ್‌ ಇರೋದ್‌ ಹೀಗೆ ಸ್ವಾಮಿ’ ಹಾಗೂ ‘ಇದೂ ಒಂದು ಸಮಸ್ಯೆಯೇ’ ಎಂಬ ನಾಟಕಗಳನ್ನೂ ರಚಿಸಿ, ನಿರ್ದೇಶಿಸಿದ್ದಾರೆ.  ‘ಅಭಿಯಂತರಂಗ’ ಎಂಬ ಹವ್ಯಾಸಿ ನಾಟಕಾಸಕ್ತರ ಸಂಸ್ಥೆಯಲ್ಲಿ ಮುಖ್ಯಪಾತ್ರ ವಹಿಸಿ ‘ತದ್ರೂಪಿ’, ‘ಅಂತಿಗೊನೆ’, ‘ಈ ಮುಖದವರು’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ‘ಭರದ್ವಾಜ’ ಅವರ ಚೊಚ್ಚಲ ...

READ MORE

Related Books