ಕಮಲಾಕಾಂತ ಸಾಧು

Author : ಭಿ.ಪ. ಕಾಳೆ

Pages 156




Year of Publication: 1937
Published by: ಯ.ಗು. ಕುಲಕರ್ಣಿ
Address: ಶ್ರೀ ಶೇಷಾಚಲ ಪ್ರೆಸ್ ಆನಂದವನ (ಅಗಡಿ), ಹಾವೇರಿ

Synopsys

ಕಮಲಾಕಾಮತ ಸಾಧು-ಎಂಬುದು ಭಿ.ಪ. ಕಾಳೆ ಬರೆದ ನೀತಿ ಬೋಧಕ ಕಾದಂಬರಿ. ಸಾಧು-ಸಜ್ಜನರು ಎಂದಿಗೂ ಲೋಕಕ್ಕೆ ಕೇಡು ಬಗೆಯಲಾರರು. ಅವರಿಗೆ ಕೇಡು ಬಯಸುವವರೂ ನಾಶವಾಗುತ್ತಾರೆ ವಿನಃ ಸಾಧು-ಸಜ್ಜನರಿಗೆ ಏನೂ ಆಗದು. ಇಂತಹ ಭಾವನೆ ಎಲ್ಲ ಧರ್ಮ-ಜಾತಿ-ದೇಶ ಮೀರಿಯೂ ತನ್ನ ಪ್ರಭಾವ ಬೀರಿದೆ. ಆದರೆ, ಇಂದು ಸಾಧುಗಳ ಹೆಸರಿನಲ್ಲಿ ವಂಚಕರ ಸಂಖ್ಯೆಯೇ ಹೆಚ್ಚುತ್ತಿದೆ. ಮನುಷ್ಯ ಸ್ವಕರ್ಮನಿರತನಾಗಿ ವಿವೇಕ ಪ್ರಜ್ಞೆಗಳನ್ನು ಮುಂದಿಟ್ಟುಕೊಂಡು ಬಾಳಿದರೆ ಆತನ ಉದ್ಧಾರಕ್ಕೆ ಸಾಧು-ಸತ್ಪುರುಷರು ಬರುವ ಅಗತ್ಯವಿಲ್ಲ. ಇಂತಹ ಸಂದೇಶ ಕಾದಂಬರಿಯ ನಿರೂಪಣೆಯು ತುಂಬಾ ಪರಿಣಾಮಕಾರಿಯಾಗಿದೆ.

About the Author

ಭಿ.ಪ. ಕಾಳೆ
(20 January 1889)

ಭಿಕಾಜಿಪಂತ ಕಾಳೆ ಎಂಬುದು  ಪೂರ್ಣ ಹೆಸರು. ಭಿ.ಪ.ಕಾಳೆ ಎಂದೇ ಖ್ಯಾತಿ. ಹೆಸರಾಂತ ಕಾದಂಬರಿಕಾರರು. ಪ್ರಕಾಶಕ-ಮುದ್ರಕರೂ ಹೌದು. ತಂದೆ ಪರಶುರಾಮ ಪಂತ ಕಾಳೆ. ಧಾರವಾಡ ಜಿಲ್ಲೆಯ ಕುಂದುಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 1889ರ ಜನವರಿ 20ರಂದು ಹುಟ್ಟಿದರು. ಕುರಂದವಾಡ ಸಂಸ್ಥಾನಿಕರ ಅಧೀನದಲ್ಲಿದ್ದ ಈ ಪ್ರದೇಶ ಪಟವರ್ಧನ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿತ್ತು. ಸಂಸ್ಥಾನಿಕರ ಮನೆ ಮಾತು ಮರಾಠಿ. ಆಡಳಿತದ ಭಾಷೆಯೂ ಮರಾಠಿ.  ಸಂಶಿ ಗ್ರಾಮವು ಮರಾಠಿಮಯವೇ ಆಗಿತ್ತು. ಮಹಾರಾಷ್ಟ್ರದಿಂದ ಪಟವರ್ಧನ ಸಂಸ್ಥಾನಕ್ಕೆ ಬಂದು ಅಲ್ಲಿಯ ಬೇರೆ ಬೇರೆ ಊರುಗಳಲ್ಲಿ ನೆಲಸಿದ ಚಿತ್ಪಾವನ (ಕೊಂಕಣಸ್ಥ) ಬ್ರಾಹ್ಮಣ ಮನೆತನಗಳಲ್ಲಿ ಕಾಳೆ ಕುಟುಂಬವೂ ಒಂದು. ಈ ಕುಂಟುಂಬ ಸಾಂಸಿಯಲ್ಲಿ ...

READ MORE

Related Books