ದುಂಬಿ ಮುಟ್ಟದ ಹೂವು

Author : ಹೆಚ್.ಜಿ. ರಾಧಾದೇವಿ

Pages 220

₹ 100.00




Year of Publication: 2018
Published by: ಓಂಶಕ್ತಿ ಪ್ರಕಾಶನ

Synopsys

ಕಾದಂಬರಿಗಾರ್ತಿ ಹೆಚ್.ಜಿ.ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ದುಂಬಿ ಮುಟ್ಟದ ಹೂವು. ಜೀವನದಲ್ಲಿ ಹೆಣ್ಣು ಮಕ್ಕಳೇ ಸಮಸ್ಯೆಗಳ ಕೇಂದ್ರ ಬಿಂದು ಆಗುವುದು.ಪುರುಷರ ಜೀವನಅಷ್ಟೊಂದು ಸೂಕ್ಷ್ಮವಲ್ಲಾ,ಆದರೆ ಮಹಿಳೆಯರಿಗೆ ಹಾಗಲ್ಲ.ಕತ್ತಿಯ ಅಲುಗಿನಂತೆ ಬದುಕು.ಆ ಅಲುಗಿನ ಮೇಲೆ ಬುದ್ಧಿವಂತಿಕೆಯಿಂದ ಬ್ಯಾಲೆನ್ಸ ಮಾಡುತ್ತ ಬದುಕಿನಲ್ಲಿ ಬೆಳಕನ್ನು ಕಾಣಬೇಕು. ದುಂಬಿಮುಟ್ಟದ ಕಾದಂಬರಿಯಲ್ಲಿ ಕುಸುಮಾಳ ಕನಸೆಲ್ಲಾ ಕಮರಿ ಬರಡು ಜೀವನವಾಗುವುದು ತುಂಬಾ ಖೇದವೆನಿಸುತ್ತದೆ. ಸಾವಿತ್ರಮ್ಮ ತಮ್ಮ ಮಕ್ಕಳು ಕುಸುಮಾ,ವಿಜಿ ಜೊತೆಗೆಬೇರೆ ಮನೆಯವರ ಕೆಲಸ ಮಾಡುತ್ತ ಕಷ್ಟದಿಂದ ಜೀವನ ನಡೆಸುತ್ತಿದ್ದರು.ಒಂದು ದಿನ ಕತ್ತಲೆಯಲ್ಲಿ ಅವರನ್ನು ಯಾರೊ ಗೂಂಡಾಗಳು ಅಟ್ಟಿಸಿಕೊಂಡು ಬಂದಾಗ,ಅವರು ತಮ್ಮ ರಕ್ಷಣೆಗಾಗಿ ಒಂದು ಶ್ರೀಮಂತರ ಮನೆಯೊಳಗೆ ಅಡಗುತ್ತಾಳೆ.ಆಗ ಮನೆಯ ಒಡತಿ ರತ್ನಮ್ಮ ಅವರಿಗೆ ಆಶ್ರಯ ನೀಡಿ ಅವರ ಕತೆಗಳನ್ನು ಕೇಳಿ,ಸಾವಿತ್ರಮ್ಮನನ್ನು ಅವರ ಮಕ್ಕಳನ್ನು ತಮ್ಮ ಮನೆಯ ಔಟ್ ಹೌಸ್ ಲ್ಲಿ ಇರಿಸಿಕೊಂಡು,ಅವರಿಗೆ ಬದುಕಲು,ತಕಲಿಯಿಂದ ನೂಲುವದನ್ನು ಕಲಿಸಿ,ಅವರ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುವಲ್ಲಿ ಸಹಾಯಮಾಡುತ್ತಾರೆ. ಲೇಖಕಿ ,ಶ್ರೀಮಂತರು ಸಮಾಜದಲ್ಲಿ ಬಡವರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ಅತ್ಯಂತ ಮಾರ್ಮಿಕವಾಗಿ ತಿಳಿಸಿರುವರು.ಸಾವಿತ್ರಮ್ಮನ ಬದುಕನ್ನು ಕಟ್ಟಿಕೊಟ್ಟ ರೀತಿ ಮನಕ್ಕೆ ತುಂಬಾ ಆಪ್ತವಾಗುತ್ತದೆ.ಅವರ ಸಹಾಯ ಇಲ್ಲಿಗೆ ನಿಲ್ಲದೆ,ಅವರ ಮಗಳು ಕುಸುಮಾಳಿಗೆ ವರನನ್ನು ಅವರೆ ಮಗನೊಟ್ಟಿಗೆ ಆರಿಸುತ್ತಾರೆ. ಆದರೆ,ಹುಡುಗಿಯನ್ನು ನೋಡಲು ಬಂದಾಗ,ಆದ ತಪ್ಪಿನಿಂದ ಕುಸುಮಾಳ ಜೀವನ ದುಂಬಿ ಮುಟ್ಟದ ಹೂವಿನಂತಾಗುವುದು ಮಾತ್ರ ಬೇಸರದ ಸಂಗತಿಯಾದರೂ,ಅದಕ್ಕೆ ಕುಸುಮಾಳೆ ಕಾರಣಳಾಗುತ್ತಾಳೆ.ಹೇಗೆಂಬುದನ್ನು ಓದಿಯೇ ತಿಳಿಯಬೇಕು..

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books