ಟಿ.ಕೆ. ರಾಮರಾವ್ ಬರೆದ ಕಾದಂಬರಿ-ಬಣ್ಣದ ಹುಳು. ನಗರದ ಸಭಾಪತಿಗೆ ವಿದೇಶಿ ಕರೆನ್ಸಿ ಸಂಗ್ರಹದ ಹವ್ಯಾಸವಿದ್ದು, ಆತ ಕೊಲೆಯಾಗಿರುತ್ತಾನೆ. ಇದರ ತನಿಖೆಯಲ್ಲಿ ಅಧಿಕಾರಿ ಪಾಸ್ಟರ್ ತೊಡಗಿ, ಇದೇ ರೀತಿಯ ವ್ಯವಹಾರದಲ್ಲಿ ತೊಡಗಿದ್ದ ವಾನಂಬಾಡಿಯ ಸಹಕಾರದಿಂದ ಹಂತಕನ ಪತ್ತೆಯಾಗುತ್ತದೆ. ಅಮಾಸೆ ಎಂಬ ಮನೆಯ ಆಳು ಬಾಗಿಲ ರಂದ್ರದಿಂದ ಏನು ನೋಡುತ್ತಾನೆ? ಸಭಾಪತಿಯ ಮಗಳು ವಲ್ಲಿಯಮ್ಮ, ವಿದೇಶಿ ಕರೆನ್ಸಿಯ ಪಿಚಾಂಡಿ, ಬಲ್ಯಾಯ, ಹೀಗೆ ಪಾತ್ರಗಳು ತಮ್ಮ ವ್ಯವಹಾರದೊಂದಿಗೆ ಓದುಗನ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತಾರೆ. ಕಥೆ ನಿರೂಪಣಾ ಶೈಲಿ ಉತ್ತಮ ಹಾಗೂ ಪರಿಣಾಮಕಾರಿಯಾಗಿದೆ.
ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931) ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್ ಷಾ -ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು. ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ...
READ MORE