ತಬ್ಬಲಿಗಳು

Author : ರಾವ ಬಹಾದ್ದೂರ

Pages 312

₹ 195.00




Year of Publication: 2014
Published by: ಅಂಕಿತ ಪುಸ್ತಕ
Address: #53, ಶ್ಯಾಮಸಿಂಗ್ ಸಂಕೀರ್ಣ, ಗಾಂಧಿಬಜಾರ, ಬಸವನಗುಡಿ, ಬೆಂಗಳೂರು -560004
Phone: 0802661 7100

Synopsys

ಖ್ಯಾತ ಕಾದಂಬರಿಕಾರ ರಾವಬಹಾದ್ದೂರ ಅವರ ಕಾದಂಬರಿ- ತಬ್ಬಲಿಗಳು. ದೇಶದ ಜನತೆಯು ಸ್ವಾತಂತ್ರ್ಯ ನಂತರ ತಬ್ಬಲಿಗಳಾದರೆ? ರಾಜಕೀಯದಲ್ಲಿ, ಪಾಶ್ಚಾತ್ಯರ ಅನುಕರಣೆ ಸಲ್ಲದು. .ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಆಗದು. ಭಾರತಕ್ಕೆ ವಿಶೇಷ ಸಂಸ್ಕೃತಿ, ರಾಜ್ಯನೀತಿ ಇದೆ. ದೇಶ ಸ್ವಾತಂತ್ರ್ಯ ನಂತರ ದಾರಿದ್ರ್ಯ ನಿವಾರಣೆಯ ಹೆಜ್ಜೆ ಹಾಕಿದೆಯೇ? ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ್ದ ರಾವಬಹಾದ್ದೂರರು, ಭಾರತವು ಸ್ವಾತಂತ್ರ್ಯ ಪಡೆದ ಉದಯ ಕಾಲದಲ್ಲಿ ಕಂಡ ಚಿತ್ರಣವನ್ನು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಈಗಲೂ ಈ ಕೃತಿಯ ವಸ್ತು ಅರ್ಥಗರ್ಭಿತ ಹಾಗೂ ಚಿಂತನಾರ್ಹವಾಗಿದೆ. ದೇಶದ ಸ್ವಾತಂತ್ಯ್ರ ನಂತರ ಜನರ ದಾರಿದ್ಯ್ರ ಮಾತ್ರ ಹೋಗಲಿಲ್ಲ. ಬಡತನದಿಂದ ಅವರಿಗೆ ಮುಕ್ತಿ ಸಿಗಲಿಲ್ಲ ಎಂಬುದೇ ಈ ಕಾದಂಬರಿಯ ವಸ್ತು ವಿಶೇಷ-ಸಂದೇಶ.

About the Author

ರಾವ ಬಹಾದ್ದೂರ
(24 September 1910 - 31 December 1984)

ರಾವ ಬಹಾದ್ದೂರ ಎಂದೇ ಖ್ಯಾತಿಯ ರಾಮಚಂದ್ರ ರಾವ್ ಕುಲಕರ್ಣಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೆಪಡಸಲಗಿಯಲ್ಲಿ 24-09-1910ರಲ್ಲಿ ಜನಿಸಿದರು. ತಂದೆ ಭೀಮರಾವ್, ತಾಯಿ ಸುಭದ್ರಾಬಾಯಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ (1935) ಬಿ.ಎ. ಪದವಿ ಪಡೆದರು. ಸ್ವಾತಂತ್ಯ್ರ ಯೋಧ ಕೌಜಲಗಿ ಹಣಮಂತರಾಯ ಜೊತೆಗೂಡಿ ‘ಚರಕ ಸಂಘ ಸೇರಿ ಅದರ ವ್ಯವಸ್ಥಾಪಕರೂ ಆದರು. ಸಂಯುಕ್ತ ಕರ್ನಾಟಕ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದರು.ಬಾಂಗ್ಲಾದೇಶ ರಚನೆಯಾದಾಗ ಅವರು ಬಾಂಗ್ಲಾಕ್ಕೆ ತೆರಳಿ ‘ನಾ ಕಂಡ ಬಾಂಗ್ಲಾದೇಶ’ ಎಂಬ ಗ್ರಂಥ ಬರೆದರು.  ಕೃತಿಗಳು: ಅಸುರಾಯಣ, ಸಾಮ್ಯವಾದ, ಇತಿಹಾಸ ಭೂತ, ವೃಂದಾವನ, ಕಾಂಚನಮೃಗ, ಧೂಮಕೇತು, ಬಾಳು ...

READ MORE

Related Books