ಸಂಚು

Author : ಬೇಲೂರು ರಾಮಮೂರ್ತಿ

Pages 120

₹ 160.00




Year of Publication: 2003
Published by: ಶ್ರೀ ಕೃಷ್ಣ ಬುಕ್‌ ಏಜೆನ್ಸಿ
Address: 4ನೇ ಕ್ರಾಸ್‌, ಹನುಮಂತನಗರ ಬೆಂಗಳೂರು

Synopsys

‘ಸಂಚು’ ಬೇಲೂರು ರಾಮಮೂರ್ತಿ ಅವರ ಪತ್ತೇದಾರಿ ಕಾದಂಬರಿಯಾಗಿದೆ. ರಾಬರ್ಟ್ ಮತ್ತು ಮೆಹರಾ ಇಬ್ಬರೂ ವ್ಯವಹಾರದಲ್ಲಿ ಪಾಲುದಾರರು. ಮೆಹರಾ ಸತ್ತು ಹೋದ ಮೇಲೆ ರಾಬರ್ಟ್ ಒಬ್ಬರೇ ಸಂಸ್ಥೆ ನಡೆಸುತ್ತಿದ್ದರು. ಆದರೆ ಒಮ್ಮೆ ತಂದೆ ಎಂದೋ ಸತ್ತುಹೋಗಿದ್ದ ಪಾರ್ಟ್ನರ್ ಕಡೆಯವರಿಗೆ ಷೇರು ಬಂಡವಾಳದ ಪಾಲು ಕೊಡುತ್ತೀನಿ ಎಂದಾಗ ಅದು ಮಗ ಅಂತೋನಿಗೆ ಸರಿಬರಲಿಲ್ಲ. ಇದಕ್ಕಾಗಿ ಆಂತೋನಿ ತನ್ನ ಗೆಳತಿ ಗೌರಿಯನ್ನುಬಳಸಿ ತಂದೆಯ ತಿಜೋರಿಯಿಂದ ಸಂಸ್ಥೆಯ ಷೇರುಗಳ ಕಾಗದ ಪತ್ರಗಳನ್ನು ತೆಗೆದುಬಿಡುವ ಸಂಚು ಮಾಡುತ್ತಾನೆ. ಈ ಕೃತ್ಯ ನಡೆಯುವಾಗ ಗೌರಿಯಿಂದ ಅಚಾತುರ್ಯದಿಂದ ಹಾರಿದ ಗುಂಡು ರಾಬರ್ಟ್ಗೆ ತಗುಲಿ ಅವರು ಗಾಯಗೊಂಡಾಗ ಆಂತೋನಿ ತಂದೆಯನ್ನು ಆಸ್ಪತ್ರೆಗೆ ಸೇರಿಸುತ್ತಾನೆ. ಗೌರಿ ಗುಂಡು ಹಾರಿಸಿದ್ದನ್ನು ಕಂಡ ಅಪಾರ್ಟ್ಮೆಂಟ್ ಕೆಲಸದ ಸರಳಳನ್ನು ಗೌರಿ ಹುಡುಕಿ ಕಡೆಗೆ ಅವಳ ಅಣ್ಣನ ಮನೆಗೆ ಹೋಗಿ ಅಲ್ಲಿ ಅವಳನ್ನು ಮುಗಿಸುತ್ತಾಳೆ. ಹೀಗೆ ಗೌರಿಯ ಅಚಾತುರ್ಯದಿಂದ ನಡೆದ ಒಂದು ಷೂಟ್ ಔಟ್ ಮತ್ತೊಂದು ಕೊಲೆಯನ್ನು ಪತ್ತೇದಾರ ಕೀರ್ತಿ ಹೇಗೆ ಬೇಧಿಸಿದರು ಎನ್ನುವುದು ಸಂಚು ಕಾದಂಬರಿಯ ಕುತೂಹಲದ ಅಂಶಗಳು.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books