ಗಾಥೆ

Author : ಯತಿರಾಜ್‍ ವೀರಾಂಬುಧಿ

Pages 152

₹ 80.00




Year of Publication: 2010
Published by: ಚಾರುಮತಿ ಪ್ರಕಾಶನ
Address: #1161, 9ನೇ ಕ್ರಾಸ್, ಕತ್ರಿಗುಪ್ಪೆ ಮುಖ್ಯರಸ್ತೆ, ಅಶೋಕನಗರ, ಬೆಂಗಳೂರು- 560050

Synopsys

‘ಗಾಥೆ’ ಯತಿರಾಜ್ ವೀರಾಂಬುಧಿ ಅವರ ಕಾದಂಬರಿ.ಅಸಂಗತ (ಅಬ್ಸರ್ಡ್ ) ಬರವಣಿಗೆಯಿಂದ ಪ್ರೇರೇಪಿತರಾದ ಕಾದಂಬರಿ ಇದು. ಲೇಖಕನನ್ನು ಸಾಯಿಸಲು ಬಂದವರು ಯಾರು, ವಾಣಿಜ್ಯೋದ್ಯಮಿಯನ್ನು ಕೊಲ್ಲಲು ಮಾಡಿದ ಯೋಜನೆ ಏನು?, ವಿಜ್ಞಾನಿಯ ಕಣ್ಮರೆಯ ಹಿಂದಿನ ರಹಸ್ಯವೇನು? ಶತ್ರುದೇಶ ಗೂಢಾಚಾರಿಕೆ ನಡೆಸಲು ಹೂಡಿದ ಉಪಾಯವೇನು? ಈ ಪ್ರಶ್ನೆಗಳಿಗೆ ಉತ್ತರಿಸಲು ವಿಜ್ಞಾನ, ಇತಿಹಾಸ, ಅತೀಂದ್ರಿಯತ್ವ, ಭೂಗೋಳ ಇತ್ಯಾದಿಗಳೊಂದಿಗೆ ಮಿಸ್ಟರಿ, ಸಸ್ಪೆನ್ಸ್ ಬೆರೆಸಿದ ಈ ರೋಚಕ ಕಾದಂಂಬರಿ, ಓದಿಸಿಕೊಂಡು ಹೋಗುತ್ತದೆ.

About the Author

ಯತಿರಾಜ್‍ ವೀರಾಂಬುಧಿ
(11 August 1957)

ಕಥೆಗಾರ,ಲೇಖಕ, ಅನುವಾದಕ, ಕಾದಂಬರಿಗಾರರಾದ ಯತಿರಾಜ್ ವೀರಾಂಬುಧಿ 11-08-1957ರಂದು ಮೈಸೂರಿನಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ ಅವರು ಮೈಸೂರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿ.ಇ (ಎಲೆಕ್ಟ್ರಿಕಲ್ ಪವರ್) ಮುಗಿಸಿದರು. ಬೆಂಗಳೂರು ಮತ್ತು ಸಲ್ತನತ್ ಆಫ್ ಒಮಾನ್‌ನಲ್ಲಿ ಕಾರ್ಯ ನಿರ್ವಹಿಸಿ 2013ರಲ್ಲಿ ನಿವೃತ್ತಿ ಪಡೆದಿದ್ದಾರೆ. ಯತಿರಾಜ್ ವೀರಾಂಬುಧಿಯವರ ಪ್ರಕಟಿತ ಕೃತಿಗಳು-  ಆಪತ್ತಿಗೆ ಆಹ್ವಾನ, ಪರಿಶೋಧ, ಗಾಥೆ, ಮರದಡಿ ಮಳೆ, ಪಂಚಾನನ, ಜೀವನ್ಮುಖಿ, ಸಾಬೀತು, ಕುರುಡು ತಿರುವು, ಅವಿನಾಭಾವ, ಹಸ್ತಕ್ಷೇಪ, ಹಾಸುಹೊಕ್ಕು, ಕಪ್ಪು ನದಿ, ಉದ್ಯೋಗ ಪರ್ವ, ಕರೆದರೆ ಬಾರೆ..!, ಒಂದೊಂದಾಗಿ ಜಾರಿದರೆ, ರಣವೀಳ್ಯ, ಚಿರಸ್ಮಿತ, ಸುಖಿಯಾಗಿರು ...

READ MORE

Related Books