ಕೈಹಿಡಿದು ನಡೆಸೆನ್ನೆನು

Author : ಗೀತಾ ಬಿ.ಯು

Pages 168

₹ 80.00




Year of Publication: 2003
Published by: ಗೀತಾ ಬಿ.ಯು
Address: 485, 47ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು- 560041

Synopsys

'ಕೈಹಿಡಿದು ನಡೆಸನ್ನೆನು' ಗೀತಾ ಬಿ.ಯು ಅವರ ಕಥಾಸಂಕಲನ. ಇಲ್ಲಿಯ ಬಹುತೇಕ ಕಥೆಗಳಿಗೆ ಸ್ಪೂರ್ತಿ; ಎಲ್ಲೋ ಓದಿದ ಸುದ್ದಿಯ ತುಣುಕು ಅಥವಾ ಕೇಳಿದ ಘಟನೆಗಳು. ಸಂಕಲನದಲ್ಲಿ 11 ಕಥೆಗಳಿವೆ.

’ಕಥೆಗಾರರು ಇಂಥ ವಸ್ತುಗಳನ್ನು ಆಯ್ದುಕೊಂಡಾಗ ತ್ರಿವೇಣಿ ಹಾಗೂ ಇಂದಿರಾ ಅವರಂತೆ ಅದಕ್ಕೆ ಸ್ವಂತ ಆತ್ಮದ ಭಾಗವನ್ನು ಧಾರೆ ಎರೆಯ ಬೇಕಾಗುತ್ತದೆ. ಆ ಘಟನೆಯ ವಿನೋದ -ವಿಷಾದಗಳು ಸ್ವಂತ ಆತ್ಮದ ನೋವು ನಲಿವಿನಂತೆ ಪ್ರತಿಧ್ವನಿಸಲೇ ಬೇಕಾಗುತ್ತದೆ. ಅಥವಾ ಮಾಸ್ತಿಯವರಂತೆ ನಿರ್ಲಿಪ್ತವಾಗಿ ಕಥೆ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಇವು ಬದುಕಿನ ಸ್ಟಿಲ್ ಫೋಟೋಗಳಂತೆ ಕಾಣುವ ಅಪಾಯವಿದೆ. ಜತೆಗೆ, ಘಟನೆಗಿಂತ ಹೆಚ್ಚಾಗಿ ಒಂದು ನಿಲುವನ್ನು ತೆಗೆದುಕೊಳ್ಳುವ ಸಂದರ್ಭ ಬಂದಾಗ ಅಥವಾ ಅದಕ್ಕೆ ಸಮರ್ಥ ಕೊನೆಯನ್ನು ಕೊಡಲು ಯತ್ನಿಸಿದಾಗ, ಗಟ್ಟಿ ಒಳಲೋಕದಿಂದ ಮೂಡಿ ಬಂದ ಸಮರ್ಥನೆಯಂತೆ ಇರಬೇಕಾಗುತ್ತದೆ’ ಎಂದು ಲೇಖಕ ಟಿ.ಎನ್. ಸೀತಾರಾಮ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books