`ಸವಿಗನಸು’ ಸಾಯಿಸುತೆ ಅವರ ಹೊಸ ಕಾದಂಬರಿ. ಗುರಿಯಿರಬೇಕು, ಗುರಿ ಸಾಧಿಸಲು ಮುನ್ನಡೆಯುವ ಕುರಿತು ಕಾದಂಬರಿ ಮೂಲಕ ಸ್ಫೂರ್ತಿ ನೀಡುವ ಕೃತಿ ಇದು. ‘ನೀನು ಸಾಧನೆಯ ಪಟ್ಟಿಯಲ್ಲಿ ಸೇರಬೇಕು. ನೂರು ಜನರಲ್ಲಿ ಸಾಧಕರು ಐದು ಜನವಾದರೆ, ಇನ್ನು ತೊಂಬತ್ತೈದು ಜನ ವೀಕ್ಷಕರು. ನಿನ್ನ ಫಲ ಸಾಧನೆ ದೇಶಕ್ಕೆ ಸಂದಾಯವಾಗಬೇಕು. ಮಾನವ ಕುಲಕ್ಕೆ ಸಂದಾಯವಾಗಬೇಕು’ ಎಂದು ಮಾಧವನತ್ತ ನೋಡಿ ನಸು ನಗೆ ಬೀರಿದಳು. ಇದು ಕಾದಂಬರಿಯ ಒಂದು ಪುಟ್ಟ ಘಟನೆಯಾದರೂ ಇದು ಸಾಧನೆಯತ್ತ ನಡೆಯುವವರಿಗೆ ಸ್ಫೂರ್ತಿಸೆಲೆಯ ಮಾತುಗಳು ಎಂದರೆ ತಪ್ಪಾಗಲಾರದು.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...
READ MORE