ಬದುಕಿನ ಸಿಹಿಜೇನು ಮತ್ತು ಮನಸ್ಸಿನ ಕಣ್ಣು

Author : ಹೆಚ್.ಜಿ. ರಾಧಾದೇವಿ

Pages 80

₹ 100.00




Year of Publication: 1981
Published by: ಹೇಮಂತ ಸಾಹಿತ್ಯ ಪ್ರಕಾಶನ
Address: ನಂ.972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060

Synopsys

'ಬದುಕಿನ ಸಿಹಿಜೇನು ಮತ್ತು ಮನಸ್ಸಿನ ಕಣ್ಣು’ ಹೆಚ್‌.ಜಿ ರಾಧಾದೇವಿ ಅವರ ಪತ್ತೆದಾರಿ ಕಾದಂಬರಿಯಾಗಿದೆ. ಆನಂದ್ ಒಬ್ಬ ಪ್ರಾಮಾಣಿಕ, ನಿಷ್ಟಾವಂತ ಪೊಲೀಸ್ ಅಧಿಕಾರಿ ರಾಮನ್ ಒಬ್ಬ ಪ್ರತಿಭಾನ್ವಿತ ವಿಜ್ಞಾನಿ. ಆನಂದ್ ನ ತಂದೆಯ ಗೆಳೆಯ. ಬಾಲ್ಯದಲ್ಲೇ ತಬ್ಬಲಿಯಾದ ಆನಂದನನ್ನು ಸಾಕಿ ಬೆಳೆಸಿದವರು. ಸೀತಾ ಆನಂದನ ಮನ ಅರಿತ ಸತಿ ಇಬ್ಬರು ಮಕ್ಕಳೂ ಇವೆ. ಒಮ್ಮೆ ಇದ್ದಕ್ಕಿದ್ದಂತೆ 'ತಕ್ಷಣ ಹೊರಟು ಬಾ' ಎಂಬ ರಾಮನ್ ರ ಟೆಲೆಗ್ರಾಂ ನೋಡಿ ಆನಂದ್ ಬರುತ್ತಾನೆ . ಅಲ್ಲಿ ಅವರು 'ಮನಸ್ಸಿನ ಕಣ್ಣು' ಸಂಶೋಧನೆ ಮಾಡಿ ಕಂಡು ಹಿಡಿದಿರುವುದಾಗಿ ಹೇಳುತ್ತಾರೆ. ಯಾವುದೇ, ವಸ್ತು, ಘಟನೆ, ಮನುಷ್ಯನನ್ನು ನೆನಪಿಸಿಕೊಂಡು ಅಂಗಾತ ಮಲಗಿ ನೆತ್ತಿಯ ಮಧ್ಯ ಭಾಗಕ್ಕೆ ಹೆಬ್ಬೆರಳು ಒತ್ತಿ ಹಿಡಿದಾಗ ಮನುಷ್ಯನ ಮನಸ್ಸು ಆ ಜಾಗಕ್ಕೆ ಹೋಗಿ ಅಲ್ಲಿ ಈಗ ನಡೆಯುತ್ತಿರುವ ಘಟನೆಗಳನ್ನು ತೋರಿಸುತ್ತದೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books