ಮೈಮನಗಳ ಸುಳಿಯಲ್ಲಿ

Author : ಶಿವರಾಮ ಕಾರಂತ

Pages 267

₹ 130.00




Year of Publication: 2013
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಮೈಮನಗಳ ಸುಳಿಯಲ್ಲಿ-ಡಾ. ಶಿವರಾಮ ಕಾರಂತ ಅವರ ಪ್ರಸಿದ್ಧ ಕಾದಂಬರಿಗಳ ಪೈಕಿ ಒಂದು. ಲೈಂಗಿಕ ವಿಷಯ ವಸ್ತುವನ್ನು ಹೊಂದಿದೆ. ಯಾವುದೇ ಅಶ್ಲೀಲತೆಯ ಭಾವನೆ ಓದುಗರಲ್ಲಿ ಉಂಟಾಗದಂತೆ ಇದರಲ್ಲಿ ಶೃಂಗಾರರಸ ಪ್ರತಿಪಾದಕ ವಸ್ತುವನ್ನು ಅತ್ಯಂತ ಸಂಯಮದಿಂದ ನಿರ್ವಹಿಸಿದ್ದು ಈ ಕಾದಂಬರಿಯ ವೈಶಿಷ್ಟ್ಯ..

ಪ್ರಣಯದ ವಿವಿಧ ಸನ್ನಿವೇಶಗಳೇ ಕಾದಂಬರಿಯ ಉದ್ದಕ್ಕೂ ಕಾಣಿಸಿಕೊಂಡರೂ, ವರ್ಣನೆ ಇಲ್ಲವೇ ಶಬ್ದಗಳ ಬಳಕೆಯಲ್ಲಾಗಲಿ ಅಶ್ಲೀಲತೆಯ ಸೋಂಕಿಲ್ಲದಂತೆ, ಅತ್ಯಂತ ಪರಿಣಾಮಕಾರಿಯಾಗಿ ಹೆಣೆಯಲಾದ ಈ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಪಮ್ಮ, ದುಗ್ಗಿಯರು ಕೀಳು ಕುಲದ ದಂಪತಿ. ಭಿಕ್ಷೆ ಬೇಡುವವರು.  ಕಡು ದಾರಿದ್ಯ್ರ ಹಾಗೂ ಮುಪ್ಪಿನಲ್ಲಿದ್ದಾಗಲೂ ಅವರ ಪರಸ್ಪರರ ಶೃಂಗಾರ, ವಯ್ಯಾರ, ಬಿನ್ನಾಣ, ಒನಪು ಸಂಭ್ರಮಿಸುತ್ತಿದ್ದರು. ಈ ಸಂಭ್ರಮವು ಆಭರಣದಿಂದ, ಅಲಂಕಾರದಿಂದ, - ಸೀರೆಯಿಂದ, ಸಂಗೀತದಿಂದಲೂ ಬರಲಾರದು ಎಂಬುದನ್ನು ಕಂಡುಕೊಂಡಿರುತ್ತಾರೆ. ಇದನ್ನು ಮಂಜುಳೆಯ ಕಾಣ್ಕೆಯೂ ಆಗಿರುತ್ತದೆ. ಪಮ್ಮ, ದುಗ್ಗಿಯರ ಬಾಳು ಹರೆಯದಲ್ಲಿ ಅದೆಷ್ಟು ಸೊಗಸಿನಿಂದ ಬೆರೆತಿತ್ತೋ, ಬೆಳೆದಿತ್ತೋ, ಗಂಡು ಹೆಣ್ಣುಗಳಲ್ಲಿನ ಮೈಯ ಆಕರ್ಷಣೆ ಕಳೆದ ಮೇಲೆಯೂ ಅದು ತನ್ನ ಸವಿಯನ್ನು, ಸೊಗಸನ್ನು ಕಳೆದುಕೊಳ್ಳದಿದ್ದುದನ್ನು ಕಂಡ ಬಳಿಕ, ಅವಳಿಗೆ 'ಸಾಯುವ ಗಳಿಗೆಯ ತನಕವೂ ಕಾದದ್ದಾದರೆ, ನನಗೂ ಯಾಕೆ ಒಬ್ಬ ಪಮ್ಮ ಸಿಗಲಾರನೆ? ” ಎಂಬ ಹಂಬಲವಾಗುತ್ತದೆ. ''ನನ್ನನ್ನು ಆ ಪಮ್ಮ ದುಗ್ಗಿಯರು ಹರಸಿದ್ದರೆ, ಈ ತೃಪ್ತಜೀವಿಗೆ ಯಾರ ಹಂಗೂ ಇಲ್ಲ; ಯಾವ ಹೊರಗಣ ಉಡುಗೊರೆಯೂ ಬೇಕಿಲ್ಲ'' ಎಂದು ಮಂಜುಳೆ ತನ್ನ ಆತ್ಮವೃತ್ತವನ್ನು ಮುಗಿಸುತ್ತಾಳೆ. ಮೈಯ ಆಕರ್ಷಣೆ ಕಳೆದ ಮೇಲೆಯೂ, ಅಂದರೆ ಮುಪ್ಪಿನಲ್ಲೂ ದಂಪತಿಗಳು ಪರಸ್ಪರರನ್ನು , ಹರೆಯದಲ್ಲಿದ್ದಂತೆಯೇ ಪ್ರೀತಿಸುತ್ತ ಸಾಗಿಸುವ ಜೀವನವೇ ಸಾರ್ಥಕ ದಾಂಪತ್ಯ ಎಂಬ ತತ್ವವನ್ನು ‘ಮೈಮನಗಳ ಸುಳಿಯಲ್ಲಿ’ ಕಾದಂಬರಿ ಸಾರುತ್ತದೆ.

ವಸುಪುರ ಅಥವಾ ಬಸರೂರು ಎಂಬುದು ವೇಶ್ಯಾವೃತ್ತಿಯನ್ನೇ ವ್ಯಸಾಯ ಮಾಡಿಕೊಂಡಿರುವ ಹಳ್ಳಿ. ಕೇವಲ ರಸಿಕತೆಗೆ ಮಾತ್ರ  ಮಾರುಹೋದ್ದಲ್ಲ. ಅಲ್ಲಿ ಶೃಂಗಾರ, ನೃತ್ಯ, ಸಂಗೀತ, ನಾಟಕಗಳಲ್ಲೂ ಇಲ್ಲಿಯ ಜನ ಅಭಿರುಚಿ ಉಳ್ಳವರಾಗಿದ್ದರು. ಗಿರಾಕಿಯು ಕೇವಲ ದೇಹ ಸುಖ ಮಾತ್ರ ಬಯಸಿ ಬರುವಂತಹವನಾಗಿರಲಿಲ್ಲ. ಬದಲಾಗಿ, ನಡವಳಿಕೆಯೂ ಉತ್ತಮವಾಗಿರುತ್ತಿತ್ತು. ಆದರೆ, ಬ್ರಿಟಿಷರ ಸಂಪರ್ಕ ಸಮೀಪವಾದಂತೆಲ್ಲ ಈ ವ್ಯವಸಾಯವು ಕೀಳು ಮಟ್ಟಕ್ಕೆ ತಲುಪಿ ವ್ಯವಹಾರವೂ ಆಗಿಬಿಟ್ಟಿತ್ತು.  ಇಂತಹ ಊರಲ್ಲಿ, ಕಥಾನಾಯಕಿ ಮಂಜುಳೆ, ಮೈ-ಮನಗಳ ತೃಪ್ತಿಗಾಗಿ ದುಡಿಯುವವಳು. ‘ಕೇವಲ ಮೈ ಮಾರುವವಳು, ಮನಸ್ಸನ್ನಲ್ಲ’ ಎಂಬ ವ್ಯಕ್ತಿತ್ವ ಅವಳದು. ಸಾಹುಕಾರ ಕಂಡಲೂರು ಪೈಗಳ ಕಾಮಭರಿತ ಪ್ರವೃತ್ತಿ ಆಕೆಯನ್ನು ನಿರಾಶೆಗೆ ದೂಡಿತ್ತು. ಯಕ್ಷಗಾನ ಪ್ರಸಿದ್ಧ ನಟ ಕೊಕ್ಕರಣೆಯ ಶೀನನ ಸಂಗವೂ ಬೇಸರ ತರಿಸಿತ್ತು.  ಅಂಪಾರಿನ ಸುಬ್ರಾಯ ಉಳ್ಳೂರರ ಸಂಗದಲ್ಲಿ ಮೈ-ಮನ ಎರಡೂ ತೃಪ್ತಿ ಕಂಡಿದ್ದವು. ಉಳ್ಳುರರು ಬೃಹನ್ನಳೆಯಾಗಿದ್ದರೂ ಪ್ರಿಯಕರನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿರುತ್ತಾರೆ. ಸನ್ಯಾಸ ದೀಕ್ಷೆ ಪಡೆದಿದ್ದ ಲಕ್ಷ್ಮಣತೀರ್ಥ ಸ್ವಾಮೀಜಿಯ ಸಂಗವು ಕೋಮಲವೂ ಅಲ್ಲದ, ಕಠಿಣವೂ ಅಲ್ಲದ ಅನುಭವ ಪಡೆಯುತ್ತಾಳೆ.  ಮಂಜುಳೆ ತನ್ನ ಕೊನೆಯ ದಿನಗಳಲ್ಲಿ ಇಂತಹ ಮಾತುಗಳನ್ನು ಹೇಳುವ ಮೂಲಕ ಜೀವನ ಸಾರ್ಥಕತೆಗೆ ಉತ್ತಮ ಮಾನದಂಡ ನೀಡುತ್ತಾಳೆ ‘ಮಂಚಕ್ಕೆ ನನ್ನ ಮನಸ್ಸು ಸೀಮಿತವಾಗಿರಲಿಲ್ಲ. ಮಂಚದಿಂದ ಮೈಯನ್ನು ತುಂಬಿತ್ತು. ಮೈಯಿಂದ ಮನವನ್ನು ತುಂಬಿತ್ತು. ಆ ಮೈ ಮನಗಳೆರಡೂ ನನ್ನ ಬಾಳಿನ ಎಲ್ಲ ಕ್ಷಣಗಳನ್ನೂ ತುಂಬಿದ್ದವು. ನನ್ನ ತಂಬೂರಿಯ ದಂಡ, ಬುರುಡೆ ಉಳ್ಳೂರರು. ಅದರ ತಂತಿ ಆನಂದರು (ಲಕ್ಷ್ಮಣತೀರ್ಥ) ಅವರಿಬ್ಬರೂ ನನ್ನ ಜತೆಯಲ್ಲಿ ಅನುದಿನ ಇರುವುದರಿಂದ ನಾನು ಸುಮಂಗಲೆ. ನಿತ್ಯ ಸುಮಂಗಲೆ. ನನ್ನನ್ನು ಆ ಪಮ್ಮ-ದುಗ್ಗಿಯರು ಹರಸಿದ್ದರೆ ಈ ತೃಪ್ತಜೀವಿಗೆ ಯಾರ ಹಂಗೂ ಇಲ್ಲ. ಯಾವ ಹೊರಗಣ ಉಡುಗೊರೆಯೂ ಬೇಕಿಲ್ಲ’ ಎಂಬುದು ಅವಳ ಆತ್ಮ-ಆಶಯ. ಇದು ಕಾದಂಬರಿಯ ಸಂದೇಶವೂ ಆಗಿದೆ.  

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹರ್ಷ ಪ್ರಕಟಣಾಲಯವು 1970ರಲ್ಲಿ (ಪುಟ: 288) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books