ಉತ್ಕಟ

Author : ಸೃಜನ್ ಗಣೇಶ್ ಹೆಗಡೆ

Pages 98

₹ 120.00




Year of Publication: 2023
Published by: ವಂಶಿ ಪಬ್ಲಿಕೇಷನ್ಸ್
Address: #4, ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ ಬಸ್ ಸ್ಟಾಪ್ ಹತ್ತಿರ, ಬಿ.ಎಚ್ ರೋಡ್, ಸುಭಾಸ್ ನಗರ, ನೆಲಮಂಗಲ ಬೆಂಗಳೂರು-562123
Phone: 9916595916

Synopsys

'ಉತ್ಕಟ' ಸೃಜನ್ ಗಣೇಶ್ ಹೆಗಡೆ ಅವರ ಕಾದಂಬರಿಯಾಗಿದೆ. ಭವದ ಆಕರ್ಷಣೆಯನ್ನು ನಿರ್ಲಕ್ಷಿಸಿ ಭಾವದ ಮೋಹಕತೆಗೆ ಮನಸೋತವರು ಕಲಾವಿದರಾಗುತ್ತಾರೆ. ರೂಢಿಯ ಮಾಯೆಗೆ ಬೆನ್ನು ಹಾಕಿ ನಡೆಯುವುದರಿಂದಲೇ ಅವರಿಗೆ ನೈತಿಕ ಶಕ್ತಿ ಹೆಚ್ಚು. ಅಂತಹ ಮೋಹನರಾಗಕ್ಕೆ ಮನಸೋತ ಯಕ್ಷಗಾನ ಕಲಾವಿದನೊಬ್ಬನ ಬದುಕಿನ ವೃತ್ತಾಂತವೊಂದು ಈ ಕಾದಂಬರಿಯಲ್ಲಿ ದಾಖಲಾಗಿದೆ. ಯಕ್ಷಗಾನದ ಆವರಣದೊಳಗಿಂದರೆ ನೋಡಿ. ಬರೆದ ಕಥನವಿದಾದ್ದರಿಂದ, ಸಂಶಯವಿಲ್ಲದ ಖಚಿತತೆ ಈ ಕೃಷಿಯ ನಿರೂಪಣೆಗೆ ದಕ್ಕಿದೆ.

About the Author

ಸೃಜನ್ ಗಣೇಶ್ ಹೆಗಡೆ
(26 September 1997)

ಸೃಜನ್ ಗಣೇಶ ಹೆಗಡೆ ಅವರ ಕಾವ್ಯನಾಮ -ಸೃಜನಾಲೋಚನ. ತಂದೆ- ಶ್ರೀಧರ್ ಹೆಗಡೆ ತಾಯಿ- ಜಯಲಕ್ಷ್ಮಿ ಹೆಗಡೆ.  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಸಮೀಪದ ಗುಬ್ಬಿಗ ಗ್ರಾಮದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು.ಯಕ್ಷಗಾನ ಭಾಗವತಿಕೆ, ತತ್ವಶಾಸ್ತ್ರ, ಅಧ್ಯಾತ್ಮ ವೈಚಾರಿಕತೆ, ವಿಮರ್ಶೆ ಕ್ಷೇತ್ರದಲ್ಲಿ ಆಸಕ್ತಿ. ಇದೆ.  ಕೃತಿಗಳು- ಗೊಂಬೆಯ ಸಂಕಟ, ರಾಧಾಸ್ನೇಹಿ, ಅನಂತ ಸೋಪಾನ(ಕವನ ಸಂಕಲನ) ಆಪ್ತ ಬಂಧನ, ಗೋಜಗಾಮೃತ (ಯಕ್ಷಗಾನ ಪ್ರಸಂಗಗಳು) . ...

READ MORE

Related Books